ಶಿಕಾರಿಪುರದ ರೈತಾಭಿಮಾನ ಕಾರ್ಯಕ್ರಮದಲ್ಲಿ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದ್ದು, ರಾಜ್ಯದಲ್ಲಿ ಅನೇಕ ಹಿರಿಯ ರಾಜಕಾರಣಿಗಳನ್ನು ನೋಡಿದ್ದೇವೆ. ಆದರೆ ಜೀವನುದ್ದಕ್ಕೂ ಹೋರಾಟ ಮಾಡಿಕೊಂಡು ಬಂದವರು ಯಡಿಯೂರಪ್ಪ. ಹೋರಾಟದ ಬೆವರಿನಿಂದ ಮೇಲೆದ್ದು, ಸ್ವಂತ ಶಕ್ತಿಯಿಂದ ಬಂದವರು ಯಡಿಯೂರಪ್ಪ.<br />ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರೈತರಿಗೆ ಹಲವು ಯೋಜನೆಗಳನ್ನು ನೀಡಿದವರು ಬಿಎಸ್ವೈ. ರಾಜ್ಯದಲ್ಲಿ ಬೆಂಕಿಯಲ್ಲಿ ಅರಳಿದ ನಾಯಕ ಅಂದ್ರೆ ಅದು ಯಡಿಯೂರಪ್ಪ.<br />ಯಡಿಯೂರಪ್ಪ ಅವರನ್ನು ರಾಜ್ಯದಲ್ಲಿ ಅಷ್ಟೇ ಅಲ್ಲ, ದೇಶದ ಎಲ್ಲಿಯೇ ಹೋದರೂ ಗುರುತಿಸುತ್ತಾರೆ, ಇದಕ್ಕೆ ಶಿಕಾರಿಪುರ ಜನತೆ ನೀಡಿರುವ ಆಶೀರ್ವಾದವೇ ಕಾರಣ ಎಂದು ತಂದೆಯನ್ನು ಹೊಗಳಿದ್ದಾರೆ. <br /><br />#PublicTV #BYVijayendra <br />