Surprise Me!

06 RMG IMPACT PKG_convPublic TV Impact : Tahshildar Vijay Kumar Visits Devaradoddi Village In Ramanagar

2022-05-28 86 Dailymotion

Public TV Impact : Tahshildar Vijay Kumar Visits Devaradoddi Village In Ramanagar <br /><br />#PublicTV #Ramanagar <br /><br />ಆ ಗ್ರಾಮದಲ್ಲಿ ಮೌಢ್ಯತೆ ಅತಿರೇಕವಾಗಿತ್ತು. ಅಲ್ಲಿನ ಮಹಿಳೆಯರು ಆ ಕೆಟ್ಟ ಕ್ಷಣ ಬಂದ್ರೆ ಪಡಬಾರದ ಕಷ್ಟ ಪಡ್ತಿದ್ರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಪಬ್ಲಿಕ್ ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ಅನಿಷ್ಠ ಪದ್ದತಿ ನಿವಾರಣೆಗೆ ಮುಂದಾಗಿದೆ. ಪಬ್ಲಿಕ್ ಟಿವಿ ಇಂಪ್ಯಾಕ್ಟ್ ವರದಿ ಇಲ್ಲಿದೆ.<br /><br />ಆಧುನಿಕತೆ ಕಾಲದಲ್ಲೂ ಅನಾಗರಿಕತೆ, ಅನಿಷ್ಠತೆಗೆ ಸಾಕ್ಷಿಯಾದ ಮತ್ತೊಂದು ಘಟನೆ ರಾಮನಗರದಲ್ಲಿ ಬೆಳಕಿಗೆ ಬಂದಿದೆ. ರಾಮನಗರ ಜಿಲ್ಲೆಯ ದೇವರದೊಡ್ಡಿ ಗ್ರಾಮದಲ್ಲಿ ಮೌಢ್ಯತೆ ಇನ್ನೂ ಜೀವಂತವಾಗಿದೆ. ಋತುಮತಿಯಾದವರು, ಹಸಿಬಾಣಂತಿಯನ್ನು ಗ್ರಾಮದಿಂದ ಹೊರಗಿಡುವ ಅನಿಷ್ಠಪದ್ಧತಿಯನ್ನು ಈಗಲೂ ಆಚರಿಸಲಾಗ್ತಿದೆ. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತಿದೆ. ರಾಮನಗರದ ದೇವರದೊಡ್ಡಿ ಗ್ರಾಮಕ್ಕೆ ತಹಶೀಲ್ದಾರ್ ವಿಜಯ್ ಕುಮಾರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. <br />ಹೌದು, ದೇವರದೊಡ್ಡಿ ಗ್ರಾಮದಲ್ಲಿ ಶ್ರೀರಂಗಪ್ಪ ದೇವರಿಗಾಗಿ ಅನಿಷ್ಠಪದ್ಧತಿಯನ್ನು ಆಚರಿಸಿಕೊಂಡು ಬಂದಿದ್ರು. ತಲೆಮಾರುಗಳಿಂದಲೂ ಋತುಮತಿಯಾದವರು, ಬಾಣಂತಿಯರನ್ನ ೨ ತಿಂಗಳು ೩ ದಿನ ಊರ ಹೊರಗಿಡಲಾಗ್ತಿತ್ತು. ಗ್ರಾಮದ ಹೊರಗೆ ಬಿದಿರಿನ ಗುಡಿಸಿಲಿನಲ್ಲಿ ಇವರು ನೋವಿನಲ್ಲೇ ದಿನಕಳಿಬೇಕಾಗಿತ್ತು. ಈ ಬಗ್ಗೆ ಬೆಳಗ್ಗೆಯಷ್ಟೇ ನಿಮ್ಮ ಪಬ್ಲಿಕ್ ಟಿವಿ ನ್ಯೂಸ್ ಕೆಫೆಯಲ್ಲಿ ವರದಿ ಪ್ರಸಾರವಾಗಿತ್ತು. ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಎಚ್ಚೆತ್ತ ತಹಶೀಲ್ದಾರ್ ವಿಜಯ್ ಕುಮಾರ್, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ರು. ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದ್ರು.<br /><br />ತಹಶೀಲ್ದಾರ್ ಜೊತೆ ಅಧಿಕಾರಿಗಳು, ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಭೇಟಿ ನೀಡಿ ಮಹಿಳೆಯರು ಅನುಭವಿಸುವ ನರಕಯಾತನೆ ಬಗ್ಗೆ ಮಾಹಿತಿ ಪಡೆದ್ರು. ಇನ್ನು ಗ್ರಾಮದ ಮುಖಂಡರ ಜೊತೆ ಚರ್ಚಿಸಿದ ಅಧಿಕಾರಿಗಳು ಅನಿಷ್ಠಪದ್ಧತಿ ಸಂಪ್ರದಾಯ ಕೈಬಿಡುವಂತೆ ಮನವೊಲಿಸಿದ್ರು. <br /><br />ದೇವರದೊಡ್ಡಿ ಗ್ರಾಮದಲ್ಲಿನ ಮೌಢ್ಯತೆ ಉದಾಹರಣೆ ಅಷ್ಟೇ. ಬಹುತೇಕ ಗ್ರಾಮಗಳಲ್ಲಿ ಇಂತಹ ಅನಿಷ್ಠಪದ್ದತಿ ಇನ್ನೂ ಇದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮೌಢ್ಯತೆಯನ್ನು ಹೋಗಲಾಡಿಸಬೇಕಿದೆ.<br /><br /><br />Watch Live Streaming On http://www.publictv.in/live

Buy Now on CodeCanyon