Surprise Me!

ಶಾಕಿಂಗ್ : ಲಾರಿ ಚಾಲನೆ ವೇಳೆ ಚಾಲಕನ ಕಾಲಿಗೆ ಸುತ್ತಿಕೊಂಡ ಹಾವು - ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

2025-05-09 1,307 Dailymotion

<p>ಚಾಮರಾಜನಗರ : ಲಾರಿ ಚಾಲನೆ ಮಾಡುತ್ತಿದ್ದ ವೇಳೆ ಚಾಲಕನ ಕಾಲಿಗೆ ಹಾವೊಂದು ಸುತ್ತಿಕೊಂಡಿರುವ ಘಟನೆ ಯಳಂದೂರು ತಾಲೂಕಿನ ಯರಿಯೂರು ಬಳಿ ಗುರುವಾರ ನಡೆದಿದೆ. </p><p>ಚಾಮರಾಜನಗರದಿಂದ ಕೊಳ್ಳೇಗಾಲಕ್ಕೆ ಲೋಡ್ ತುಂಬಿಕೊಂಡು ಸದ್ದಾಂ ಎಂಬ ಚಾಲಕ ಲಾರಿ ಚಾಲನೆ ಮಾಡುವಾಗ ದಿಢೀರ್ ಎಂದು ಕ್ಯಾಬಿನ್​ನಿಂದ ಕೇರೆ ಹಾವೊಂದು ಬಂದು ಕಾಲಿಗೆ ಸುತ್ತಿಕೊಂಡಿದೆ. ಈ ವೇಳೆ ಎದುರಿನಿಂದ ಹಾಗೂ ಹಿಂಬದಿಯಿಂದ ಬಸ್, ಬೈಕ್ ಬರುವುದನ್ನು ಕಂಡಿರುವ ಚಾಲಕ ಗಾಬರಿಗೊಳಗಾಗದೇ ಲಾರಿಯನ್ನು ರಸ್ತೆಬದಿ ನಿಲ್ಲಿಸಿ ಅವಘಡವೊಂದನ್ನು ತಪ್ಪಿಸಿದ್ದಾರೆ. </p><p>ಇದಾದ ಬಳಿಕ ವಿಷಯ ತಿಳಿದು ಉರಗ ರಕ್ಷಕ ಸ್ನೇಕ್ ಮಂಜು ಸ್ಥಳಕ್ಕೆ ದೌಡಾಯಿಸಿ, ಕ್ಯಾಬಿನ್ ಒಳಗೆ ಸೇರಿಕೊಂಡಿದ್ದ ಹಾವನ್ನು ರಕ್ಷಿಸಿದ್ದಾರೆ. </p><p>ಈ ಬಳಿಕ ಉರಗ ರಕ್ಷಕ ಸ್ನೇಕ್ ಮಂಜು ಅವರು ಮಾತನಾಡಿದ್ದು, ಚಾಲಕನ ಕಾಲಿಗೆ ಹಾವು ಸುತ್ತಿಕೊಂಡ ಬಳಿಕ ಚಾಲಕ ತಕ್ಷಣಕ್ಕೆ ಗಾಬರಿಗೊಂಡು ಲಾರಿಯನ್ನು ನಿಲ್ಲಿಸಿದ್ದರೆ ಹಿಂದಿನಿಂದ ಬರುತ್ತಿದ್ದ ವಾಹನಗಳು ಡಿಕ್ಕಿ ಹೊಡೆದುಕೊಳ್ಳಬೇಕಿತ್ತು. ಸಮಯ ಪ್ರಜ್ಞೆಯಿಂದ ಲಾರಿಯನ್ನು ಪಕ್ಕಕ್ಕೆ ನಿಲ್ಲಿಸಿರುವುದು ಶ್ಲಾಘನೀಯ ಎಂದಿದ್ದಾರೆ.</p><p>ಇದನ್ನೂ ಓದಿ :  ತುಮಕೂರಿನ ಸಿದ್ದಗಂಗಾ ಮಠದಲ್ಲಿ 8 ಅಡಿ ಉದ್ದದ ಹೆಬ್ಬಾವು: ಅರಣ್ಯ ಪ್ರದೇಶಕ್ಕೆ ಬಿಟ್ಟ ಉರಗ ತಜ್ಞರು - 8 FEET LONG PYTHON CAUGHT</a></p>

Buy Now on CodeCanyon