<p>ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಇಂದು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾದರು. </p><p>ಯಡಿಯೂರಪ್ಪ ಅವರ ಮೊಮ್ಮಗ, ಸಂಸದ ರಾಘವೇಂದ್ರ ಅವರ ಹಿರಿಯ ಪುತ್ರ ಸುಭಾಷ್ ಅವರ ವಿವಾಹ ಆರತಕ್ಷತೆ ಶಿಕಾರಿಪುರ ಕುಮದ್ವತಿ ಕಾಲೇಜು ಆವರಣದಲ್ಲಿ ಇಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗಮಿಸಿದ್ದರು. ನವ ದಂಪತಿಗೆ ಶುಭಾಶಯ ಕೋರಲು ವೇದಿಕೆಗೆ ಆಗಮಿಸಿದಾಗ ಸ್ವತಃ ಯಡಿಯೂರಪ್ಪನವರೇ ಈಶ್ವರಪ್ಪರನ್ನು ಬರಮಾಡಿಕೊಂಡರು. </p><p>ನಂತರ ಯಡಿಯೂರಪ್ಪ ಈಶ್ವರಪ್ಪನವರ ಹೆಗಲ ಮೇಲೆ ಕೈ ಹಾಕಿ ಆತ್ಮೀಯವಾಗಿ ಕೆಲಕಾಲ ಮಾತನಾಡಿದರು. ಈಶ್ವರಪ್ಪ ನವಜೋಡಿಗೆ ಶುಭಹಾರೈಸಿ ವಾಪಸ್ ಆಗುವಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎದುರಾದರು. ಈ ವೇಳೆ ಈಶ್ವರಪ್ಪ ಹಾಗೂ ವಿಜಯೇಂದ್ರ ಆತ್ಮೀಯವಾಗಿ ಮಾತನಾಡಿದರು. ಈಶ್ವರಪ್ಪನವರು ವಿಜಯೇಂದ್ರರ ಭುಜ ತಟ್ಟಿ ನಗುತ್ತಾ ವಾಪಸ್ ಆದರು.</p><p>ಕಳೆದ ಲೋಕಸಭಾ ಚುನಾವಣೆಯಲ್ಲಿ ಈಶ್ವರಪ್ಪನವರು ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ನಂತರ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಿ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದರು.</p><p>ಇದನ್ನೂ ಓದಿ: ವಿಡಿಯೋ: ನಾಗಾರ್ಜುನ ಕಿರಿಮಗನ ಆರತಕ್ಷತೆ ಕಾರ್ಯಕ್ರಮದಲ್ಲಿ ಯಶ್, ಸುದೀಪ್ ಸೇರಿ ಗಣ್ಯರು</a></p>
