Surprise Me!

ಕಪಿಲಾ ಪ್ರವಾಹ: ನಂಜನಗೂಡಿನ ದೇವಾಲಯ, ಮಲ್ಲನ ಮೂಲೆ ಮಠ ಜಲಾವೃತ

2025-07-27 67 Dailymotion

<p>ಮೈಸೂರು: ಕೇರಳದ ವಯನಾಡಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಕಬಿನಿ ಜಲಾಶಯದಿಂದ ಹೊರಹರಿವು ಹೆಚ್ಚಳವಾಗಿದೆ. ಕಪಿಲಾ ನದಿ ಪ್ರವಾಹದಿಂದಾಗಿ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರನಿಗೂ ಜಲ ದಿಗ್ಬಂಧನವಾಗಿದೆ. ಕಬಿನಿ ಹಾಗೂ ನುಗು ಜಲಾಶಯದಿಂದ ಒಟ್ಟಾರೆ 70 ಸಾವಿರ ಕ್ಯೂಸೆಕ್‌ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. </p><p>ಇದರಿಂದಾಗಿ ಮಲ್ಲನ ಮೂಲೆ ಮಠ ಜಲಾವೃತವಾಗಿದೆ. ಪ್ರವಾಹದ ಹೆಚ್ಚಳದಿಂದಾಗಿ ನಂಜನಗೂಡು ನಗರದ ತೋಪಿನ ಬೀದಿ, ಸರಸ್ವತಿ ಕಾಲೋನಿ ಹಾಗೂ ಹಳ್ಳದ ಕೇರಿ ಬಡಾವಣೆಯಲ್ಲಿ ಮನೆಗಳು ಜಲಾವೃತಗೊಂಡಿವೆ. ಕಪಿಲಾ ನದಿಯ ಹದಿನಾರು ಕಾಲು ಮಂಟಪ ಮರದ ಭಾಗ ಮುಳುಗಡೆಯಾಗಿದೆ. </p><p>ನಂಜುಂಡೇಶ್ವರ ಸ್ವಾಮಿಯ ದೇವಾಲಯದ ಕಪಿಲಾ ನದಿಯ ಸ್ನಾನ ಘಟ್ಟಗಳು, ಅಯ್ಯಪ್ಪ ಸ್ವಾಮಿ ದೇವಾಲಯ, ಪರಶುರಾಮ ದೇವಾಲಯ, ಶ್ರೀಕಂಠೇಶ್ವರ ಕಲ್ಯಾಣ ಮಂಟಪ, ಹಳ್ಳದ ಕೇರಿ, ದೇವಾಲಯದಲ್ಲಿರುವ ಅಂಗಡಿ ಮುಗ್ಗಟ್ಟುಗಳಿಗೂ ಕೂಡ ಪ್ರವಾಹದ ನೀರು ಹರಿದು ಸಂಪೂರ್ಣವಾಗಿ ಮುಳುಗಡೆಯಾಗಿದೆ. </p><p>ಇನ್ನು ಸಾರ್ವಜನಿಕರಿಗೆ ಮತ್ತು ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಈಗಾಗಲೇ ತಾಲೂಕಿನ ಜನರು ತಂಡೋಪತಂಡವಾಗಿ ಆಗಮಿಸಿ ಕಪಿಲಾ ನದಿ ನೀರು ಹರಿಯುತ್ತಿರುವುದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಪೊಲೀಸರು ಬ್ಯಾರಿಕೇಡ್​ಗಳನ್ನು ಹಾಕಿ ಕಟ್ಟೆಚ್ಚರ ವಹಿಸಿದ್ದಾರೆ.</p><p>ಇದನ್ನೂ ಓದಿ: ಉಕ್ಕಿ ಹರಿಯುತ್ತಿರುವ ತುಂಗಭದ್ರಾ: ಶ್ರೀ ಕ್ಷೇತ್ರ ಉಕ್ಕಡಗಾತ್ರಿಗೆ ಜಲದಿಗ್ಬಂಧನ, ರಸ್ತೆ, ಸೇತುವೆಗಳು ಜಲಾವೃತ</a></p>

Buy Now on CodeCanyon