<p>ದಾವಣಗೆರೆ : ನಾಗರಪಂಚಮಿ ಹಬ್ಬದ ದಿನದಂದೇ ನಗರದ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಾಗರಹಾವೊಂದು ಪ್ರತ್ಯಕ್ಷವಾಗಿದೆ. </p><p>ಹಾವನ್ನು ಕಂಡ ಪೊಲೀಸರು ಕೆಲ ಕಾಲ ಗಲಿಬಿಲಿಗೊಂಡಿದ್ದಾರೆ. ಠಾಣೆಯ ಒಳಗೆ ಪ್ರವೇಶ ಮಾಡಿದ ನಾಗರಹಾವು ಹೆಡೆ ಎತ್ತಿ ಎಲ್ಲರಿಗೂ ದರ್ಶನ ನೀಡಿದೆ. ಹಾವು ಠಾಣೆಯೊಳಗೆ ಬಂದಿದ್ದರಿಂದ ಕೆಲ ಪೊಲೀಸ್ ಸಿಬ್ಬಂದಿ ಆತಂಕದಲ್ಲೇ ಕಾರ್ಯನಿರ್ವಹಿಸಿದ್ದಾರೆ. </p><p>ಠಾಣೆವೊಳಗೆ ಬುಸು ಗುಡುತ್ತ ಸರ ಸರ ನಡೆದ ನಾಗರಹಾವು ಕ್ಷಣಾರ್ಧದಲ್ಲೇ ಮಾಯವಾಗಿದೆ. ನಾಗಪ್ಪ ಠಾಣೆಯೊಳಗೆ ಬರುತ್ತಿದ್ದಂತೆ ಠಾಣಾ ಸಿಬ್ಬಂದಿ ಒಮ್ಮೆಲೇ ಆತಂಕಗೊಂಡು ಹಾವಿಗಾಗಿ ಹುಡುಕಾಡತೊಡಗಿದ್ದಾರೆ. </p><p>ಸ್ಥಳಕ್ಕೆ ಜನರು ಬರುತ್ತಿದ್ದಂತೆ ನಾಗರಹಾವು ಪೊದೆಯಲ್ಲಿ ಕಣ್ಮರೆಯಾಗಿದೆ. ಸದ್ಯ ಹಾವಿನ ಚಲನವಲನವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. </p><p>ಕಾಳಿಂಗಸರ್ಪ ರಕ್ಷಣೆ (ಪ್ರತ್ಯೇಕ ಸುದ್ದಿ) : ಬಲ್ಲಮಾವಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಲಜಿ ಗ್ರಾಮದ ನಿವಾಸಿ ಅಪ್ಪುಮಣಿಯಂಡ ರಘು ಸುಬ್ಬಯ್ಯ ಎಂಬವರ ಗದ್ದೆಯಲ್ಲಿದ್ದ 10 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಮೂರ್ನಾಡಿನ ಉರಗತಜ್ಞ ಸ್ನೇಕ್ ಪ್ರಜ್ವಲ್ ಜುಲೈ 24 ರಂದು ರಕ್ಷಣೆ ಮಾಡಿದ್ದರು.</p><p>ಇದನ್ನೂ ಓದಿ : ಗದ್ದೆಯಲ್ಲಿದ್ದ ಬೃಹತ್ ಗಾತ್ರದ ಕಾಳಿಂಗಸರ್ಪ ರಕ್ಷಣೆ: ವಿಡಿಯೋ - KING COBRA RESCUED</a></p>