Surprise Me!

ಶಿವಮೊಗ್ಗ : ಸ್ಕೂಟರ್​​ನಲ್ಲಿ‌ ಸೇರಿಕೊಂಡಿದ್ದ ನಾಗರಹಾವು ರಕ್ಷಿಸಿದ ಸ್ನೇಕ್ ಕಿರಣ್

2025-08-02 35 Dailymotion

<p>ಶಿವಮೊಗ್ಗ : ಟಿವಿಎಸ್ ಸ್ಕೂಟರ್​​ನಲ್ಲಿ‌ ಅಡಗಿಕೊಂಡಿದ್ದ ನಾಗರಹಾವೊಂದನ್ನು ಸ್ನೇಕ್‌ ಕಿರಣ್ ಅವರು ರಕ್ಷಣೆ ಮಾಡಿದ್ದಾರೆ.  </p><p>ಶಿವಮೊಗ್ಗದ ಹೊರ ವಲಯದ ಸುಬ್ಬಯ್ಯ ಮೆಡಿಕಲ್‌ ಕಾಲೇಜಿನಲ್ಲಿ ಕೆಲಸ ಮಾಡುವ ಸುಮ ಎಂಬುವರ ಟಿವಿಎಸ್ ಜ್ಯೂಪಿಟರ್ ಬೈಕ್​​ನಲ್ಲಿ ಈ ಹಾವು ಸೇರಿಕೊಂಡಿತ್ತು. </p><p>ಸುಮ ಅವರು ಸುಬ್ಬಯ್ಯ ಮೆಡಿಕಲ್‌ ಕಾಲೇಜಿಗೆ ಡ್ಯೂಟಿಗೆಂದು ಹೋದಾಗ ಇವರ ಬೈಕ್​ನಲ್ಲಿ ಹಾವು ಸೇರಿಕೊಂಡಿದ್ದನ್ನು ಆಸ್ಪತ್ರೆಯ ಡಾ. ಸುನೀಲ್ ನಾಯ್ಕ್ ಅವರು ನೋಡಿದ್ದರು. ನಂತರ ಈ ಬಗ್ಗೆ ಸುಮ ಅವರಿಗೆ ತಿಳಿಸಿದ್ದಾರೆ. ಸುಮ ಅವರು ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದರು.  </p><p>ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಬಂದ ಸ್ನೇಕ್ ಕಿರಣ್ ಅವರು ಮೊದಲು ಬೈಕ್ ಅನ್ನು ಪರಿಶೀಲಿಸಿದರು. ಆದರೆ ಹಾವು ಮಾತ್ರ ಕಂಡು ಬಂದಿಲ್ಲ. ಕೊನೆಗೆ ಮೆಕ್ಯಾನಿಕ್​​​ ಓರ್ವರನ್ನು ಸ್ಥಳಕ್ಕೆ ಕರೆಯಿಸಿ ಬೈಕ್ ಸೀಟ್ ಕೆಳಭಾಗವನ್ನು ಬಿಚ್ಚಿದಾಗ ಅಲ್ಲಿ ಹಾವು ಬಚ್ಚಿಟ್ಟುಕೊಂಡಿರುವುದು ಕಂಡಿದೆ. ಸುಮಾರು ಎರಡೂವರೆ ಅಡಿ ಉದ್ದವಿದ್ದ ನಾಗರಹಾವನ್ನು ಅತ್ಯಂತ ಸುರಕ್ಷಿತವಾಗಿ ಹಿಡಿದು ಚೀಲದಲ್ಲಿ ಹಾಕಿ, ನಂತರ ಅರಣ್ಯ ಇಲಾಖೆಯವರ ಅನುಮತಿಯೊಂದಿಗೆ ಕಾಡಿಗೆ ಬಿಟ್ಟು ಬಂದಿದ್ದಾರೆ.</p><p>ಈ ಕುರಿತು ಸ್ನೇಕ್ ಕಿರಣ್ ಅವರು ಈಟಿವಿ ಭಾರತ್​​ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, 'ಮಳೆಯ ವಾತಾವರಣ ಇದ್ದ ಕಾರಣಕ್ಕೆ ಹಾವು ಸ್ವಲ್ಪ ಬೆಚ್ಚಗಿನ ವಾತಾವರಣವನ್ನು ಹುಡುಕುತ್ತದೆ. ಹೀಗಾಗಿ, ನಾಗರಹಾವು ಬೈಕ್​​ನಲ್ಲಿ ಸೇರಿಕೊಂಡಿರಬಹುದು. ಬೈಕ್ ಚಲಿಸಿಕೊಂಡು ಬಂದು ನಿಂತಾಗ ಸ್ವಲ್ಪ ಹೀಟ್ ಆಗಿರುತ್ತದೆ. ಇದರಿಂದಾಗಿ ಹಾವು ಬೈಕ್​​ನಲ್ಲಿ ಸೇರಿಕೊಂಡಿರಬಹುದು' ಎಂದಿದ್ದಾರೆ.</p><p>ಇದನ್ನೂ ಓದಿ : ಕಳಸದಲ್ಲಿ ಅಪರೂಪದ ಮಲಬಾರ್ ಪಿಟ್ ವೈಪರ್ ಹಾವು ಪತ್ತೆ: ವಿಡಿಯೋ - MALABAR PIT VIPER SNAKE</a></p>

Buy Now on CodeCanyon