Surprise Me!

ಮಂತ್ರಾಲಯದಲ್ಲಿ ಸಪ್ತರಾತ್ರೋತ್ಸವದ ಎರಡನೇ ದಿನ: ಪ್ರಹ್ಲಾದ ರಾಜರ ಪಲ್ಲಕ್ಕಿ ಉತ್ಸವ ಭವ್ಯ ಮೆರವಣಿಗೆ

2025-08-10 29 Dailymotion

<p>ರಾಯಚೂರು: ಕಲಿಯುಗ ಕಾಮಧೇನು, ಭಕ್ತರ ಕಲ್ಪವೃಕ್ಷ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಸಪ್ತರಾತ್ರೋತ್ಸವದ ಎರಡನೇ ದಿನದಂದು, ಶ್ರೀ ಪ್ರಹ್ಲಾದ ರಾಜರ ಪಲ್ಲಕ್ಕಿ ಉತ್ಸವವ ಶ್ರೀ ಮಠದಿಂದ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ಭವ್ಯ ಮೆರವಣಿಗೆ ಜರುಗಿತು.</p><p>ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಈ ಮಹೋತ್ಸವ ನಡೆಯುತ್ತಿದೆ. ಶ್ರೀ ಸ್ವಾಮೀಜಿ ಪರಿಮಳ ತೀರ್ಥದಲ್ಲಿ ಶ್ರೀ ಪ್ರಹ್ಲಾದ ರಾಜರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪುಷ್ಕರಣಿಯಲ್ಲಿ ಭವ್ಯವಾದ ತೆಪ್ಪೋತ್ಸವ ನೆರವೇರಿತು. ಇದನ್ನು ಎಲ್ಲಾ ಭಕ್ತರು ಕಣ್ತುಂಬಿಕೊಳ್ಳವ ಮೂಲಕ ಹಬ್ಬದ ಸಂಭ್ರಮ ಮನೆ ಮಾಡಿತ್ತು.</p><p>ಉಂಜಲ ಮಂಟಪದಲ್ಲಿ ಶಾಕೋತ್ಸವ: ಆರಾಧನಾ ಮಹೋತ್ಸವ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು, ವಾತಾವರಣ ಭಕ್ತಿ ಮತ್ತು ಸಂತೋಷದಿಂದ ತುಂಬಿತ್ತು. ಕಾರ್ಯಕ್ರಮದ ಸಮಯದಲ್ಲಿ, ಜಗದೀಶ್​ ಪುತ್ತೂರು ಮತ್ತು ತಂಡದಿಂದ ಭಾವಪೂರ್ಣ ದಾಸವಾಣಿಯು ಆಧ್ಯಾತ್ಮಿಕ ವಾತಾವರಣದ ಮೆರಗನ್ನು ಮತ್ತಷ್ಟು ಹೆಚ್ಚಿಸಿತು. ಮಠಕ್ಕೆ ಹಿಂತಿರುಗಿದ ನಂತರ, ಉಂಜಲ ಮಂಟಪದಲ್ಲಿ ಶಾಕೋತ್ಸವವನ್ನು ನಡೆಸಲಾಯಿತು. ಹಾಗೇ ಬಳಿಕ ರಥೋತ್ಸವವನ್ನು ನಡೆಸಲಾಯಿತು. ಜೊತೆಗೆ ವಿಶೇಷವಾದ ಪೂಜಾ-ಕೈಂಕರ್ಯಗಳು ಸಹ ನಡೆಯುತ್ತಿವೆ.</p><p>ಇದನ್ನೂ ಓದಿ :ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ</a></p>

Buy Now on CodeCanyon