Surprise Me!

ಹಾವೇರಿ ವರದಾ ನದಿ ಸೇತುವೆಗೆ ಬಿದ್ದ ಟ್ರ್ಯಾಕ್ಟರ್: ಮೂವರ ರಕ್ಷಣೆ -Watch Video

2025-08-13 133 Dailymotion

<p>ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ವರದಾ ನದಿಯ ಬ್ರಿಡ್ಜ್​ ಕಂ ಬ್ಯಾರೇಜ್​ಗೆ ಬಿದ್ದ ಘಟನೆ ಹಾವೇರಿ ತಾಲೂಕಿನ ಮರಡೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.</p><p>ಮೆಣಸಿನಕಾಯಿ ಚೀಲ ತೆಗೆದುಕೊಂಡು ಹೋಗುವಾಗ ಘಟನೆ: ಟ್ರ್ಯಾಕ್ಟರ್​ನಲ್ಲಿ ಮೂವರಿದ್ದು, ಅವರನ್ನು ಸ್ಥಳೀಯರು ಸೇರಿದಂತೆ ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ್ದಾರೆ. ಗ್ರಾಮದ ಸುರೇಶ ದೊಡ್ಡಗೌಡರ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್​ ಆಗಿದ್ದು, ನದಿಗೆ ಬಿದ್ದಿದೆ. ಮೆಣಸಿನಕಾಯಿ ಚೀಲವನ್ನು ತೆಗೆದುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದ ವೇಳೆ ಈ ಅವಗಡ ಸಂಭವಿಸಿದೆ.</p><p>ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಸಣ್ಣನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಬ್ರಿಡ್ಜ್ ಕಂ ಬ್ಯಾರೇಜ್​ಗೆ ತಡೆಗೋಡೆ ನಿರ್ಮಿಸುವಂತೆ ಮನವಿ‌ ಮಾಡಿದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.</p><p>ಈ ಬಗ್ಗೆ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿ, "ಈ ಸ್ಥಳದಲ್ಲಿ ಸುರಕ್ಷತೆ ಇಲ್ಲ. ಇದು ಡೇಂಜರ್​ ಝೋನ್​ ಆಗಿದೆ. ತುರ್ತು ಸಮಯದಲ್ಲಿ ಯಾರನ್ನಾದರೂ ರಕ್ಷಿಸಲು ಇಲ್ಲಿ ಯಾವ ಉಪಕರಣಗಳೂ ಇಲ್ಲ. ಈಗಾಗಲೇ ಇದೇ ತರಹ ಘಟನೆಯಿಂದ ಮೂವರನ್ನು ಕಳೆದುಕೊಂಡಿದ್ದೇವೆ. ಹಾಗಾಗಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ" ಮನವಿ ಮಾಡಿದರು.</p><p>ಇದನ್ನೂ ಓದಿ: ರಾಯಚೂರು: ತುಂಬಿ ಹರಿಯುವ ನದಿ ದಾಟಿ ವೃದ್ಧೆಯ ಶವಸಂಸ್ಕಾರ ಮಾಡಿದ ಜನರು</a></p>

Buy Now on CodeCanyon