<p>ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿ, ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಇರುವ ಆನೆ ಶೆಡ್ನಲ್ಲಿ ವಾಸ್ತವ್ಯ ಹೂಡಿರುವ ಆನೆಗಳು ಬೆಳಗ್ಗೆ ಮತ್ತು ಸಂಜೆ ತಾಲೀಮಿನ ಜೊತೆಗೆ ವಿಶೇಷ ಆಹಾರ ತಿನ್ನುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಸಜ್ಜಾಗುತ್ತಿವೆ. ಈ ಮಧ್ಯೆ ಆನೆ ಶೆಡ್ ನಲ್ಲಿರುವ ಮಹೇಂದ್ರ ಹಾಗೂ ಲಕ್ಷ್ಮಿ ಮೇವು ತಿನ್ನುತ್ತಾ ಚಿನ್ನಾಟ ಆಡುತ್ತಿರುವ ವಿಡಿಯೋ ಈಟಿವಿ ಭಾರತ ಕ್ಯಾಮರಾದಲ್ಲಿ ಸೆರೆಯಾಗಿದೆ. </p><p>ಆ. 4ರಂದು ಅರಣ್ಯಭವನದಿಂದ ಅರಮನೆಗೆ ಬಂದ ಎಲ್ಲ ಆನೆಗಳು ತಾಲೀಮು, ವಿಶ್ರಾಂತಿ ಜತೆಗೆ ಮಹಾಮಜ್ಜನದ ತಂಪಿನಲ್ಲಿ ಹಾಯಾಗಿವೆ. ನೋಡುಗರ ಕಣ್ಮನ ಸೆಳೆಯುತ್ತಿವೆ. ನೋಡುಗರ ಕುತೂಹಲ, ಖುಷಿ ಅರಳುವಂತೆ ಮಹೇಂದ್ರ- ಲಕ್ಷ್ಮಿ ಇಬ್ಬರೂ ಮೋಜಿನಲ್ಲಿವೆ.</p><p>ಈ ಎರಡು ಆನೆಗಳು ಬಳ್ಳೆ ಶಿಬಿರದಿಂದ ಬಂದಿದ್ದು, ಮಹೇಂದ್ರ ಕಳೆದ ಬಾರಿ ಸಾಲಾನೆಯಾಗಿ ಬಂದಿದ್ದ ಹಾಗೆಯೇ ಲಕ್ಷ್ಮಿ ಕುಮ್ಕಿ ಆನೆಯಾಗಿ ನಾಡಹಬ್ಬ ದಸರಾದಲ್ಲಿ ಭಾಗಿಯಾಗಿತ್ತು. ಅದೇ ರೀತಿ ಈ ಬಾರಿಯ ನಾಡಹಬ್ಬದಲ್ಲೂ ತಮ್ಮ ಕಾಯ೯ವನ್ನು ನಿವ೯ಹಿಸಲಿವೆ. ಮಹೇಂದ್ರ ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಅಪಾಯಕಾರಿ ಕಾರ್ಯಾಚರಣೆಯಲ್ಲಿ ವಿಶಿಷ್ಟವಾದ ಧೈಯ೯ ಹೊಂದಿದ್ದಾನೆ. ಲಕ್ಷ್ಮಿ ಆನೆಯನ್ನು ಸರ್ಕಸ್ ಕಂಪನಿಯಿಂದ ಕರೆದುಕೊಂಡು ಬರಲಾಗಿತ್ತು. ನಾಡಹಬ್ಬದ ಉತ್ಸವದಲ್ಲಿ ಈಗ ಎರಡನೇ ಬಾರಿಗೆ ಭಾಗವಹಿಸಲು ಸಿದ್ಧವಾಗಿದೆ.</p><p>ಇದನ್ನೂ ಓದಿ : ಜಿಂಕೆ ಹಿಂಡು ಕಂಡು ಓಡಿದ ಚಿರತೆ; ಸಫಾರಿ ಜೀಪ್ ಮುಂದೆಯೇ ಹುಲಿರಾಯನ ಚಿನ್ನಾಟ! Video - BANDIPUR WILD ANIMALS</a></p>