Surprise Me!

ಚಿಕ್ಕಮಗಳೂರು: ಧಾರಾಕಾರ ಮಳೆ, ಉಕ್ಕಿ ಹರಿದ ತುಂಗೆ; ರಸ್ತೆಗಳು ಜಲಾವೃತ

2025-08-17 79 Dailymotion

<p>ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ 48 ಗಂಟೆಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಅದರಲ್ಲೂ ಮಲೆನಾಡಲ್ಲಿ ಭಾರಿ ಗಾಳಿ, ಮಳೆಯ ಅಬ್ಬರ ಜೋರಾಗಿದೆ. ತುಂಗಾ ನದಿ ಮೈದುಂಬಿ ಅಪಾಯದ ಮಟ್ಟದಲ್ಲಿ ಹರಿಯಲು ಪ್ರಾರಂಭಿಸಿದೆ. </p><p>ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದಲ್ಲಿ ಜೋರು ಮಳೆ ಸುರಿಯುತ್ತಿದ್ದು, ತುಂಗಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಶೃಂಗೇರಿಯಲ್ಲಿ ನದಿ ನೀರು ರಸ್ತೆಯ ಮಟ್ಟಕ್ಕೆ ಹರಿಯಲು ಪ್ರಾರಂಭಿಸಿದೆ.</p><p>ಮಳೆ ಹೀಗೇ ಮುಂದುವರಿದರೆ ಗಾಂಧಿ ಮೈದಾನ, ಪ್ಯಾರಲಲ್ ರಸ್ತೆ ಜಲಾವೃತವಾಗುವ ಸಾಧ್ಯತೆ ಹೆಚ್ಚಾಗಿದೆ. ನದಿಪಾತ್ರದ ಹೊಲ, ಗದ್ದೆ, ತೋಟಗಳಿಗೆ ನೀರು ನುಗ್ಗುವ ಆತಂಕ ಜನರಲ್ಲಿ ಮನೆಮಾಡಿದೆ.</p><p>ಮೂಡಿಗೆರೆ ತಾಲೂಕಿನ ಕುದುರೆಮುಖ ಭಾಗದಲ್ಲಿ ಮಘೆ ಮಳೆ ಅಬ್ಬರಿಸುತ್ತಿದೆ. ಕಿಗ್ಗಾ - ಮಳೂರು - ಕೋಗಿನಬೈಲು - ಮೇಲ್ಗಟ್ಟದ ಗ್ರಾಮದ ರಸ್ತೆಗಳು ಜಲಾವೃತವಾಗಿವೆ.</p><p>ಕೊಟ್ಟಿಗೆಹಾರ - ಚಾರ್ಮಾಡಿಯಲ್ಲಿ ಮಳೆ ಅಬ್ಬರಕ್ಕೆ ವಾಹನ ಸವಾರರು ಪರದಾಡಿದರು. ಮೂಡಿಗೆರೆಯ ಬಿದರಹಳ್ಳಿ ಬಳಿ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. </p><p>ಇದನ್ನೂ ಓದಿ: ಶೃಂಗೇರಿ ಪಟ್ಟಣಕ್ಕೆ ಬಂದ ಕಾಡಾನೆಗಳು: ತುಂಗಾ ನದಿಯಲ್ಲಿ ಸ್ನಾನ- ವಿಡಿಯೋ - WILD ELEPHANTS</a></p>

Buy Now on CodeCanyon