<p>ಚಿಕ್ಕಮಗಳೂರು : ಹಬ್ಬ, ಹರಿದಿನ, ಉತ್ಸವ ಎಂದರೆ ಜಿಲ್ಲೆಯಲ್ಲಿ ಎಲ್ಲಿಲ್ಲದ ಸಂಭ್ರಮ, ಸಡಗರ ಇರಲಿದೆ. ಅದೇ ರೀತಿ ಭಾನುವಾರ (ಆ.17) ನಗರದ ಕೋಟೆ ಕೆಂಚರಾಯ ಸ್ವಾಮಿ ಶ್ರಾವಣ ಉತ್ಸವ ಸಂಭ್ರಮದಿಂದ ಜರುಗಿದ್ದು, ಕೆಂಚರಾಯನಿಗೆ 101 ಎಡೆ ಸಮರ್ಪಿಸಿ, ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.</p><p>ವರ್ಷಕ್ಕೊಮ್ಮೆ ಮಾತ್ರ ಕೋಟೆ ಕೆಂಚರಾಯ ಉತ್ಸವ ನಡೆಯಲಿದ್ದು, ಈ ಉತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡು, ದೇವರ ಉತ್ಸವವನ್ನು ನೆರವೇರಿಸಿದರು. ಕೆಂಚರಾಯನ ಉತ್ಸವ ಮೂರ್ತಿ ಕುಣಿತ ನೆರೆದಿದ್ದ ಭಕ್ತರ ಗಮನವನ್ನು ಸೆಳೆಯಿತು.</p><p>ಜಿಲ್ಲೆಯಲ್ಲಿ ಪ್ರತಿ ವರ್ಷ ಕೆಂಚರಾಯನಿಗೆ ಹರಿಸೇವೆ ಸಲ್ಲಿಸಿ, ಪೂಜೆ ಸಲ್ಲಿಕೆ ಮಾಡಲಾಗುತ್ತಿದೆ. ವಿಶೇಷ ಸಂಪ್ರದಾಯ ಪೂಜೆಯಿಂದಲೇ ಈ ಉತ್ಸವ ಗಮನ ಸೆಳೆಯಲಿದೆ. ಶ್ರಾವಣ ಮಾಸದಲ್ಲೇ ನಡೆಯುವ ಈ ಉತ್ಸವದಲ್ಲಿ ಕೋಟೆ ಹಾಗೂ ಸುತ್ತಮುತ್ತಲಿನ ಸಾವಿರಾರು ಜನರು ಭಾಗವಹಿಸಲಿದ್ದಾರೆ. </p><p>ಉತ್ಸವದ ಹಿನ್ನೆಲೆ ನಗರದ ಕೋಟೆ ಬಡಾವಣೆ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಈ ಉತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಭಾಗದಿಂದ ಸೇರಿದಂತೆ, ಮಲೆನಾಡು ಹಾಗೂ ಬಯಲು ಸೀಮೆ ಭಾಗಗಳಿಂದಲೂ ಭಕ್ತಾದಿಗಳು ಆಗಮಿಸಿ, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ವಿಶೇಷ ಪೂಜೆಯನ್ನು ನೆರವೇರಿಸಿದರು. </p><p>ಇದನ್ನೂ ಓದಿ : ತುಮಕೂರು : ಪುಟ್ಟ ಮಕ್ಕಳಿಗೆ ಕೃಷ್ಣ-ರಾಧೆಯ ವೇಷಗಳನ್ನು ತೊಡಿಸಿ ಜನ್ಮಾಷ್ಟಮಿ ಸಂಭ್ರಮಾಚರಣೆ - JANMASHTAMI CELEBRATION</a></p>