<p>ಬಾಗಲಕೋಟೆ: ಗಣೇಶ ಹಬ್ಬವನ್ನು ಎಲ್ಲೆಡೆ ವಿಜೃಂಭಣೆಯಿಂದ, ಜೊತೆಗೆ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಕೆಲವೆಡೆ, ಬೆಲ್ಲದಿಂದ, ಹೂವಿನಿಂದ, ಮಣ್ಣಿನಿಂದ ಗಣಪನನ್ನು ತಯಾರಿಸಿ, ಆರಾಧಿಸಿದರೆ, ಬಾಗಲಕೋಟೆ ಜಿಲ್ಲೆಯ ಇಳಕಲ್ನ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎಲೆಗಳಲ್ಲಿ ಗಣಪನ ನಿರ್ಮಿಸಿ ವಿಶಿಷ್ಟ ಕಲಾ ಭಕ್ತಿ ಮರೆದಿದ್ದಾರೆ.</p><p>ಸುಮಾರು 35 ವರ್ಷಗಳಿಂದ ನಿರುಪಯುಕ್ತ ವಸ್ತುಗಳಿಂದ ಗಣೇಶನನ್ನು ನಿರ್ಮಿಸುತ್ತಾ ಬಂದಿರುವ ಈ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈ ಬಾರಿ ಮರದ ಎಲೆಗಳಿಂದ ಸುಮಾರು 10 ಅಡಿ ಎತ್ತರದ ಗಣೇಶನನ್ನು ನಿರ್ಮಿಸಿ ತಮ್ಮ ಕಲಾಭಕ್ತಿಯನ್ನು ಪ್ರದರ್ಶಿಸಿದ್ದಾರೆ. </p><p>ಬಣ್ಣ ಬಣ್ಣದ ಸಾವಿರಾರು ಎಲೆಗಳನ್ನು ವಿದ್ಯಾರ್ಥಿಗಳು ಹುಡುಕಿ ತಂದಿದ್ದು, ಪ್ರಾಂಶುಪಾಲ ಡಾ. ಬಸವರಾಜ ಗವಿಮಠ, ಮತ್ತು ಉಪನ್ಯಾಸಕ ಮೌನೇಶ್ ಬಡಿಗೇರ ಅವರ ಮಾರ್ಗದರ್ಶನದಲ್ಲಿ ಈ ಎಲೆಯ ಗಣಪನನ್ನು ನಿರ್ಮಾಣ ಮಾಡಿದ್ದಾರೆ. </p><p>ಅತಿವೃಷ್ಠಿ ಅನಾವೃಷ್ಠಿಯಿಂದ ಪರಿಸರ ತನ್ನ ಸಮತೋಲನ ಕಳೆದುಕೊಳ್ಳುತ್ತಿದ್ದು, ಇದಕ್ಕೆ ಪರಿಸರ ಸಂರಕ್ಷಣೆಯೇ ಮಾರ್ಗ ಎಂದು ಸಂದೇಶ ನೀಡಲು ಎಲೆಗಳಿಂದ ಗಣೇಶನನ್ನು ನಿರ್ಮಿಸಿ, ಪರಿಸರ ಸಂಸರಕ್ಷಣೆ ವಿಘ್ನ ವಿನಾಯಕನಿಂದ ಆಗಲಿ ಎಂಬ ಆಶಯದಿಂದ ಎಲೆಗಳಲ್ಲಿ ಗಣೇಶನನ್ನು ನಿರ್ಮಿಸಲಾಗಿದೆ ಎನ್ನುತ್ತಾರೆ ಮಹಾವಿದ್ಯಾಲಯದ ಪ್ರಾಂಶುಪಾಲರು.</p><p>ಇದನ್ನೂ ನೋಡಿ: ದಾವಣಗೆರೆ: ಮೂರುವರೆ ಕ್ವಿಂಟಾಲ್ ಗೋವಿನ ಗೆಜ್ಜೆಯಲ್ಲಿ ಸಿದ್ಧವಾಯ್ತು ಹದಿಮೂರುವರೆ ಅಡಿ ಎತ್ತರದ ಗಣೇಶನ ಮೂರ್ತಿ</a></p>