<p>ರಾಯಚೂರು: ಹಾವು ಕಂಡರೆ ಎಲ್ಲರೂ ಭಯಪಡುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮನೆ ಮುಂದೆ ಪ್ರತ್ಯಕ್ಷವಾದ ನಾಗರಹಾವಿಗೆ ಪೂಜೆ ಸಲ್ಲಿಸಿರುವ ಅಪರೂಪದ ಘಟನೆ ನಡೆದಿದೆ.</p><p>ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಜಂಗಿರಾಂಪೂರು ತಾಂಡಾದಲ್ಲಿ ಸೋಮವಾರ ಈ ಘಟನೆ ನಡೆದಿದೆ. ತಾಂಡದ ನಿವಾಸಿಯಾಗಿರುವ ಸುನೀಲ್ ಪವಾರ್ ಎನ್ನುವರ ಮನೆಯ ಮುಂದೆ ನಾಗರಹಾವು ಪ್ರತ್ಯಕ್ಷವಾಗಿದ್ದು, ಎಲ್ಲರೂ ಭಯಭೀತರಾಗಿದ್ದರು. ಆಗ ಉರಗರಕ್ಷಕರಿಗೆ ಮಾಹಿತಿ ನೀಡಿದ್ದು, ಉರಗ ರಕ್ಷಕ ಮನೆಗೆ ಆಗಮಿಸಿದ್ದರು.</p><p>ಆದರೆ ಹಾವನ್ನು ಸೆರೆ ಹಿಡಿಯುವುದಕ್ಕೂ ಮುನ್ನ ಸುನೀಲ್ ಪವಾರ್ ನಾಗರಹಾವಿಗೆ ಪೂಜೆ ಮಾಡಿ ಆರಾಧಿಸಿದ್ದಾರೆ. ಮನೆಯ ಮುಂದೆ ನಾಗಪ್ಪ ಬಂದಿದ್ದಾನೆ ಎಂದು ಮನೆಯ ಮಾಲೀಕ ಹೆಡೆಯೆತ್ತಿ ನಿಂತಿದ್ದ ಹಾವಿಗೆ ಪೂಜೆ ಮಾಡಿದ್ದಾರೆ. ಕಾಯಿ ಒಡೆದು ನಮಸ್ಕರಿಸಿದ್ದಾರೆ. ಈ ವೇಳೆ ಹಾವು ಕೂಡ ಹೆಡೆ ಎತ್ತಿ ನಿಂತು ಪೂಜೆ ಸ್ವೀಕರಿಸಿದಂತೆ ಕಂಡು ಬಂದಿದೆ. ಅಲ್ಲದೇ ಗ್ರಾಮಸ್ಥರು ಈ ಅಪರೂಪದ ದೃಶ್ಯ ನೋಡಲು ಮುಗಿಬಿದ್ದಿದ್ದರು. </p><p>ಪೂಜೆ ಬಳಿಕ ಉರಗರಕ್ಷಕ ಹಾವನ್ನು ಹಿಡಿದು ಕೊಂಡೊಯ್ದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಮನೆಯ ಮಾಲೀಕ ಹಾವಿಗೆ ಪೂಜೆ ಮಾಡುವುದನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.</p><p>ಇದನ್ನೂ ನೋಡಿ: ಆನೇಕಲ್: ಚಪ್ಪಲಿಯಲ್ಲಿದ್ದ ಕೊಳಕು ಮಂಡಲ ಕಚ್ಚಿ ಟೆಕ್ಕಿ ಸಾವು</a></p>
