Surprise Me!

ಮತ್ತೆ ಫೀಲ್ಡ್​​ಗಿಳಿದ ಒಂಟಿ ಸಲಗ: ಊಟಿಗೆ ತೆರಳುವ ಮಾರ್ಗ ಮಧ್ಯೆ ಗಜರಾಜ ಕಿರಿಕ್

2025-09-04 44 Dailymotion

<p>ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಇಂದು ಬೆಳ್ಳಂಬೆಳಗ್ಗೆ ರೋಲ್​ ಕಾಲ್ ರಾಜ ಫೀಲ್ಡ್​ಗೆ ಇಳಿದು ವಾಹನ ಸವಾರರನ್ನು ಗಲಿಬಿಲಿಗೊಳಿಸಿದ್ದಾನೆ‌. ಗೂಡ್ಸ್ ವಾಹನದ ಚಾಲಕರು ಹಫ್ತಾ ಕೊಡದೇ ಇದ್ದರೆ ಜಪ್ಪಯ್ಯ ಅಂದರೂ ಈತ ಬಿಡುವುದೇ ಇಲ್ಲ. ಬಾಳೆ, ತರಕಾರಿ, ಕಬ್ಬಿನ ವಾಹನಗಳೇ ಈತನ ಟಾರ್ಗೆಟ್ ಆಗಿದ್ದು, ಪ್ರತಿಯೊಂದು ಗೂಡ್ಸ್​ ವಾಹನವನ್ನು ಪಿನ್​ ಟು ಪಿನ್ ಚೆಕ್ ಮಾಡಿದ ಬಳಿಕವಷ್ಟೇ ಹೊರಡಲು ಬಿಡುತ್ತಿದ್ದಾನೆ.</p><p>ಅರಣ್ಯ ಸಿಬ್ಬಂದಿಗೂ ಡೋಂಟ್​ ಕೇರ್​, ಪಟಾಕಿ ಸಿಡಿಸಿದರೂ ನೋ ಯ್ಯೂಸ್​ ಎಂಬಂತೆ ಬಂಡೀಪುರದಲ್ಲಿ ಆಗಾಗ ಕಾಡಿನಿಂದ ನಾಡಿಗೆ ಬಂದು ತರಕಾರಿ, ಕಬ್ಬು, ಬಾಳೆಹಣ್ಣಿನ ವಾಹನ ದರೋಡೆ ಮಾಡುತ್ತಿರುವ ಈ ಒಂಟಿ ಸಲಗನ ಉಟಪಳಕ್ಕೆ ವಾಹನ ಸವಾರರು ರೋಸಿ ಹೋಗಿದ್ದಾರೆ. </p><p>ಒಂಟಿ ಸಲಗನ ಹಾವಳಿಗೆ ನಲುಗಿಹೋಗಿರುವ ಗೂಡ್ಸ್ ವಾಹನ ಚಾಲಕರು, ಲಾರಿಗೆ ಟಾರ್ಪಲ್ ಹಾಕಿದರೂ‌ ಬಿಡದೇ ಟಾರ್ಪಾಲನ್ನೇ ತೆಗೆಯಲು ಪ್ರಯತ್ನಿಸುತ್ತಿದೆ. ಅದರಂತೆ, ಬುಧವಾರ (ಸೆ. 3) ಕೂಡ ಬಂಡೀಪುರದಿಂದ ಊಟಿಗೆ ತೆರಳುವ ಮಾರ್ಗ ಮಧ್ಯೆ ಗಜರಾಜ ಕಿರಿಕ್​​ ಮಾಡುವ ದೃಶ್ಯ ಮೊಬೈಲ್​​​ ಕ್ಯಾಮರಾದಲ್ಲಿ ಸೆರೆಯಾಗಿದೆ.</p><p>ಇದನ್ನೂ ಓದಿ: ಬಂಡೀಪುರದಲ್ಲಿ ರಸ್ತೆಗಿಳಿದ ಕಾಡಾನೆ; ಭಯದಲ್ಲಿ ಕಿರುಚಿದ ಪ್ರವಾಸಿಗರು</a></p>

Buy Now on CodeCanyon