Surprise Me!

₹857 ಕೋಟಿ ಅನುದಾನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಇಲಾಖೆಯ ಅಭಿವೃದ್ಧಿ: ಸಚಿವ ದಿನೇಶ್​ ಗುಂಡೂರಾವ್

2025-09-27 7 Dailymotion

<p>ರಾಯಚೂರು: "ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಇಲಾಖೆಯನ್ನು ಉತ್ತೇಜನಕ್ಕೆ ನೀಡುವ ನಿಟ್ಟಿನಲ್ಲಿ 857 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿ ಕಾಮಗಾರಿ ನಡೆಯುತ್ತಿದೆ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್​ ಗುಂಡೂರಾವ್​​ ಹೇಳಿದರು.</p><p>ಜಿಲ್ಲೆಯ ಸಿಂಧನೂರಿನ ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ 350 ಕೋಟಿ ರೂ. ಸರ್ಕಾರದ 500 ಕೋಟಿ ರೂ. ಅನುದಾನ ಈ ಭಾಗದ ಆರೋಗ್ಯ ಇಲಾಖೆಗೆ ಮಾಡಿದ್ದು, ಇದೊಂದು ಐತಿಹಾಸಿಕ ಅನುದಾನವಾಗಿದೆ. ಜಿಲ್ಲೆಯಲ್ಲಿ 8 ಪ್ರಾಥಮಿಕ ಆರೋಗ್ಯ, 3 ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ, ಲಿಂಗಸೂಗುರು ತಾಲೂಕಿಗೆ ಕ್ರಿಟಿಕಲ್ ಕೇರ್ ಆಸ್ಪತ್ರೆ ಮಂಜೂರು ಮಾಡಲಾಗಿದೆ. ಜಿಲ್ಲೆಗೆ ಒಟ್ಟು 16 ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ" ಎಂದು ತಿಳಿಸಿದರು.</p><p>"ಯಾದಗಿರಿ ಸೇರಿ ಎರಡು ಜಿಲ್ಲೆಯಲ್ಲಿ ಆರೋಗ್ಯ ಆವಿಷ್ಕಾರ ಯೋಜನೆಗೆ ಸಿಎಂ ಚಾಲನೆ‌ ನೀಡಿದ್ದು, ಆರೋಗ್ಯ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಬಸವಕಲ್ಯಾಣ ಮತ್ತು ಸಿಂಧನೂರು ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು, ಹೆಚ್ಚುವರಿ 100 ಹಾಸಿಗೆಗಳನ್ನು ನೀಡುವ ಮೂಲಕ ಎಂಆರ್, ಸಿಟಿ ಸ್ಕ್ಯಾನಿಂಗ್​ ಸೇರಿ ಮೂಲಭೂತ ಸೌಕರ್ಯಗಳಗಳನ್ನು ಒದಗಿಸಲಾಗುವುದು" ಎಂದರು. ರಾಜ್ಯದಲ್ಲಿ 1,800 ಎಂಬಿಬಿಎಸ್​ ವೈದ್ಯರನ್ನು ನೇಮಕ ಮಾಡಲಾಗಿದ್ದು, ವೈದ್ಯರ ಸಮಸ್ಯೆ ಇಲ್ಲ" ಎಂದು ಹೇಳಿದರು.</p><p>ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಶಾಸಕ ಹಂಪನಗೌಡ ಬಾದರ್ಲಿ ಹಾಜರಿದ್ದರು.</p><p>ಇದನ್ನೂ ಓದಿ: ಶಾಲೆ ಜಾಗವನ್ನು ಕುಡಿಯುವ ನೀರಿನ ಯೋಜನೆಗೆ ನೀಡಿದ ಪಿಡಿಒ: ಬೇರೆಡೆ ಜಾಗ ನೀಡುವಂತೆ ಗ್ರಾಮಸ್ಥರಿಂದ ಒತ್ತಾಯ</a></p>

Buy Now on CodeCanyon