Surprise Me!

ಬೆಳಗ್ಗೆ ದೇವರಿಗೆ ಕೈ ಮುಗಿಯಲು ಬಂದವರಿಗೆ ಶಾಕ್: ಕಳ್ಳರ ಪಾಲಾಯ್ತು ಹುಂಡಿ ಹಣ

2025-11-14 1 Dailymotion

<p>ಚಾಮರಾಜನಗರ: ದೇವಸ್ಥಾನದ ಹುಂಡಿಗಳನ್ನು ಕದ್ದೊಯ್ದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚೆನ್ನಂಜಯ್ಯನಹುಂಡಿ, ಯಡಹುಂಡಿಯಲ್ಲಿ ಬುಧವಾರ ನಡೆದಿದೆ. ಬೆಳಗ್ಗೆ ಗ್ರಾಮಸ್ಥರು ದೇವಸ್ಥಾನಕ್ಕೆ ಕೈಮುಗಿಯಲು ಹೋದಾಗ ಹುಂಡಿಗಳಿಗೆ ಕಳ್ಳರು ಕನ್ನ ಹಾಕಿರುವುದು ಗೊತ್ತಾಗಿದೆ.</p><p>ರಾತ್ರಿ ಇದ್ದ ದೇವರ ಹುಂಡಿಯನ್ನು ಬೆಳಗಾಗುವಷ್ಟರಲ್ಲಿ ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಚೆನ್ನಂಜಯ್ಯನಹುಂಡಿ ಮತ್ತು ಯಡಹುಂಡಿ ಗ್ರಾಮದ ದೇವಾಲಯದಲ್ಲಿ ಇದ್ದ ಹುಂಡಿಯನ್ನು ಕಳ್ಳರು ಕದ್ದು, ಅದರಲ್ಲಿ ಇದ್ದ ಹಣ ತೆಗೆದುಕೊಂಡು ಹುಂಡಿಯನ್ನು ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ.</p><p>ಬುಧವಾರ ಬೆಳಗ್ಗೆ ದೇವರಿಗೆ ಕೈ ಮುಗಿಯಲು ಬಂದ ಗ್ರಾಮಸ್ಥರಿಗೆ ದೇವಾಲಯದ ಬಾಗಿಲ ಬೀಗ ಒಡೆದಿರುವುದು ಕಂಡು ಬಂದು ಒಳಹೊಕ್ಕು ನೋಡಿದರೆ ದೇವಾಲಯದೊಳಗೆ ಇಟ್ಟಿದ್ದ ಹುಂಡಿ ಕಾಣೆಯಾಗಿತ್ತು. ಸುತ್ತಮುತ್ತಲು ಪರಿಶೀಲಿಸಿದಾಗ ದೂರದಲ್ಲಿ ಹುಂಡಿ ಮಾತ್ರ ಪತ್ತೆಯಾಗಿದೆ. ಆದರೆ, ಅದರೊಳಗಿದ್ದ ಹಣ ಮಾತ್ರ ಕಾಣೆಯಾಗಿತ್ತು.</p><p>ಯಡಹುಂಡಿಯಲ್ಲಿ ಕಳೆದ 6-7 ತಿಂಗಳಿಂದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ಇದೀಗ ಕಳ್ಳರ ಪಾಲಾಗಿದೆ. ಈ ಬಗ್ಗೆ ಪೊಲೀಸರು ಸೂಕ್ತವಾದ ತನಿಖೆ ನಡೆಸಿ ಕಳ್ಳರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪೊಲೀಸರ ಗಸ್ತು ಹೆಚ್ಚಾದಾಗ ಮಾತ್ರ ಕಳ್ಳತನ ಪ್ರಕರಣಗಳು ನಿಲ್ಲುವಂತಾಗುತ್ತದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.</p><p>ಯಡಹುಂಡಿಯ ಗಣಪತಿ ಹಾಗೂ ಚೆ.ಹುಂಡಿಯ ಶನೇಶ್ವರ ದೇಗುಲ ಹುಂಡಿಗೆ ಕನ್ನ ಹಾಕಲಾಗಿದ್ದು, ಗಣಪತಿ ದೇಗುಲದ ಅರ್ಧ ಬಾಗಿಲನ್ನೇ ಮುರಿದು ಕಳ್ಳರು ಹುಂಡಿಯನ್ನು ಹೊತ್ತೊಯ್ದಿದ್ದಾರೆ. ಸ್ಥಳಕ್ಕೆ ತೆರಕಣಾಂಬಿ ಠಾಣೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.</p>

Buy Now on CodeCanyon