<p>ಮಂಡ್ಯ: ಅಂಗಡಿಗೆ ಪೇಂಟ್ ತರಲು ಹೋದ ವ್ಯಕ್ತಿ ಹೃದಯಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ನಡೆದಿದೆ.</p><p>ನೋಡನೋಡುತ್ತಿದ್ದಂತೆ ಹೃದಯ ಸ್ತಂಭನವಾಗಿ ಪೇಂಟ್ ಅಂಗಡಿಯಲ್ಲೇ ಕುಸಿದುಬಿದ್ದು ವ್ಯಕ್ತಿ ಸಾವನ್ನಪ್ಪಿದ್ದು, ಮನಕಲುಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಲ್ಲಾಗಾಲ ಗ್ರಾಮದ ಈರಣ್ಣಯ್ಯ (58) ಮೃತ ವ್ಯಕ್ತಿ.</p><p>ಹಲಗೂರಿನ ಪೇಂಟ್ ಅಂಗಡಿಯೊಂದಕ್ಕೆ ಈರಣ್ಣಯ್ಯ ತೆರಳಿದ್ದರು. ಈ ವೇಳೆ ಏಕಾಏಕಿ ನಿಂತಲ್ಲೇ ಅವರು ಕುಸಿದು ಬಿದ್ದಿದ್ದಾರೆ. ಅಂಗಡಿ ಮಾಲೀಕ ಅವರನ್ನು ಹಿಡಿದು ಮೇಲೆತ್ತುವಷ್ಟರಲ್ಲಿ ಸ್ಥಳದಲ್ಲೇ ಈರಣ್ಣಯ್ಯರ ಪ್ರಾಣಪಕ್ಷಿ ಹಾರಿಹೋಗಿದೆ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.</p><p>ಇದನ್ನೂ ಓದಿ: ಹುಬ್ಬಳ್ಳಿ: ನೇತ್ರದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಎಎಸ್ಐ ಚಂದ್ರಕಾಂತ ಹುಟಗಿ</a></p><p>ಕಲಘಟಗಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ಹುಟಗಿ (58) ಅವರು ನವೆಂಬರ್ 16ರಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರ ಕುಟುಂಬ ಚಂದ್ರಕಾಂತ ಅವರ 2 ಕಣ್ಣುಗಳನ್ನು ದಾನ ಮಾಡಿದ್ದಾರೆ. ಚಂದ್ರಕಾಂತ ಹುಟಗಿ ಅವರು ಕಲಾವಿದರು. ನಟರಾಗಿ, ಸಂಗೀತಗಾರರಾಗಿ, ಕೊಳಲುವಾದಕರಾಗಿ ಆಗಿಯೂ ಚಿರಪರಿಚಿತರು. ಇವರು ಪೊಲೀಸ್ ಇಲಾಖೆಯಷ್ಟೇ ಅಲ್ಲದೆ, ಇತರೆ ಇಲಾಖೆಗಳೊಂದಿಗೂ ಉತ್ತಮ ಬಾಂಧವ್ಯ, ಸ್ನೇಹ ಹೊಂದಿದ್ದರು.</p>
