Surprise Me!

ಕೃಷ್ಣಮೃಗ ಅಭಯಾರಣ್ಯದಲ್ಲಿ ಶಾಸಕ ಕೋಳಿವಾಡ ಸಫಾರಿ: ಚಿರತೆ ಪ್ರತ್ಯಕ್ಷ

2025-12-02 76 Dailymotion

<p>ಹಾವೇರಿ: ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಅವರು ಸೋಮವಾರ ಸಂಜೆ ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯಕ್ಕೆ ಸಫಾರಿಗೆ ತೆರಳಿದ್ದು, ಈ ವೇಳೆ ಚಿರತೆ ಕಂಡು ಬಂದಿದೆ. ಚಿರತೆ ದೃಶ್ಯವನ್ನು ಶಾಸಕ ಕೋಳಿವಾಡ ಅವರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.</p><p>ಶಾಸಕ ಪ್ರಕಾಶ್​ ಕೋಳಿವಾಡ ಜೊತೆ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎನ್. ರಾಮಪ್ಪ ಹಾಗೂ ಇತರರು ಸೇರಿ ಸಫಾರಿಗೆ ಹೋಗಿದ್ದರು. ಈ ವೇಳೆ ಅಡಗಿ ಕುಳಿತಿದ್ದ ಚಿರತೆ ದಿಢೀರ್ ಪ್ರತ್ಯಕ್ಷವಾಗಿದೆ. ಚಿರತೆ ಕಾಣಿಸಿಕೊಂಡಿದ್ದನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.</p><p>ಸಫಾರಿ ವಾಹನದಲ್ಲಿ ಹೋಗುತ್ತಿದ್ದಾಗ ಮೊದಲಿಗೆ ಕೃಷ್ಣಮೃಗಗಳ ಹಿಂಡು ಜಿಗಿಯುವ ದೃಶ್ಯ ಕಂಡು ಬಂದಿದೆ. ಸಫಾರಿ ವಾಹನವನ್ನು ಕೆಲಕಾಲ ನಿಲ್ಲಿಸಿ, ಪ್ರಕಾಶ್​ ಕೋಳಿವಾಡ ಅವರು ತಮ್ಮ ಮೊಬೈಲ್​ನಲ್ಲಿ ಕೃಷ್ಣಮೃಗಗಳು ಜಿಗಿಯುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ನಯನ ಮನೋಹರ ದೃಶ್ಯ ನೋಡಿದ ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಚಿರತೆ ಮರಿ ಹಾಕಿದ್ದು, ಮರಿಗಳ ಹತ್ತಿರ ಬಂದಿತ್ತು. ಸಫಾರಿ ವಾಹನ‌ ಕಾಣುತ್ತಿದ್ದಂತೆ ಅಭಯಾರಣ್ಯದ ಅಂಚಿನಲ್ಲಿರುವ ಕಬ್ಬಿನ ಹೊಲಕ್ಕೆ‌ ಚಿರತೆ ತೆರಳಿತು.</p><p>ಇದನ್ನೂ ನೋಡಿ: ಆನೇಕಲ್: ಕಾಡು ಕೋಣದ ಆಟಾಟೋಪ, ಜನರಲ್ಲಿ ಆತಂಕ</a></p>

Buy Now on CodeCanyon