Surprise Me!

ಶ್ರೀ ಅಂತರಘಟ್ಟಮ್ಮ ದೇವಿ ರಥಕ್ಕೆ ಎತ್ತಿನ ಗಾಡಿ ಡಿಕ್ಕಿ, ವ್ಯಕ್ತಿಗೆ ಗಂಭೀರ ಗಾಯ: ವಿಡಿಯೋ

2026-01-28 5 Dailymotion

<p>ಚಿಕ್ಕಮಗಳೂರು: ಬೀರೂರು ಪಟ್ಟಣದ ಕರಗಲ್‌ ಬೀದಿಯಲ್ಲಿ ನೆಲೆಸಿರುವ ಶ್ರೀ ಅಂತರಘಟ್ಟಮ್ಮದೇವಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಕರಗಲ್‌ ಬೀದಿಯಲ್ಲಿರುವ ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವ ಭಕ್ತರ ಹರ್ಷೋದ್ಘಾರದ ನಡುವೆ ವೀರಭದ್ರಸ್ವಾಮಿ ರಸ್ತೆವರೆಗೂ ಸಾಗಿತು.</p><p>ಈ ರಥೋತ್ಸವ ನಡೆದ ಕೂಡಲೇ ಪಾನಕದ ಎತ್ತಿನ ಬಂಡಿ ಓಟದ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಒಟ್ಟು 68 ಎತ್ತಿನ ಗಾಡಿಗಳು ಭಾಗವಹಿಸಿದ್ದವು. ಎತ್ತುಗಳು ರೇಸ್ ಕುದುರೆಗಳಂತೆ ಓಡಿದವು. ರೋಮಾಂಚಕ ಸ್ಪರ್ಧೆಯನ್ನು ಸಾವಿರಾರು ಜನರು ರಸ್ತೆಯ ಎರಡು ಬದಿಗಳಲ್ಲಿ ನಿಂತು ವೀಕ್ಷಿಸಿದರು.</p><p>ರಥಕ್ಕೆ ಎತ್ತಿನ ಗಾಡಿ ಡಿಕ್ಕಿ: ಪಾನಕದ ಬಂಡಿ ಓಟದ ಸ್ಪರ್ಧೆಯಲ್ಲಿ ಸಾಲು ಸಾಲು ಅವಘಡಗಳು ಜರಗಿದ್ದು, ಪಾನಕದ ಎತ್ತಿನ ಗಾಡಿಗಳ ಓಟದ ವೇಳೆ ನಿಯಂತ್ರಣ ತಪ್ಪಿದ ಎತ್ತಿನ ಗಾಡಿಗಳು ಜನರ ಮೇಲೆ ನುಗ್ಗಿವೆ. ರಥಕ್ಕೆ ಎತ್ತಿನ ಗಾಡಿ ಡಿಕ್ಕಿಯಾಗಿದ್ದರಿಂದ ಒಂದು ಕ್ಷಣ ರಥ ಅಲುಗಾಡಿ ಭಕ್ತರಲ್ಲಿ ಆತಂಕ ಸೃಷ್ಟಿಸಿತು.</p><p>ಎತ್ತಿನ ಗಾಡಿ ಡಿಕ್ಕಿಯಾಗಿ ವ್ಯಕ್ತಿಗೆ ಗಂಭೀರ ಗಾಯ: ಎತ್ತಿನ ಗಾಡಿ ಡಿಕ್ಕಿಯಾಗಿದ್ದರಿಂದ ಬೀರೂರು ನಿವಾಸಿ ಚಂದ್ರಶೇಖರ್ ಎಂಬವರ ಕಾಲು, ಕೈ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ.</p><p>ಇವುಗಳನ್ನೂ ಓದಿ:</p><ul><li>ಚಿಕ್ಕಮಗಳೂರು ಫಲಪುಷ್ಪ ಪ್ರದರ್ಶನ ಚೈತ್ರೋತ್ಸವ: ಕಣ್ಮನ ಸೆಳೆದ ಸಾಲುಮರದ ತಿಮ್ಮಕ್ಕ, ದೇವಿರಮ್ಮನ ಬೆಟ್ಟ ಕಲಾಕೃತಿ</a></li><li>ಇತಿಹಾಸ ಪ್ರಸಿದ್ದ ಶ್ರೀ ಶಕುನ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ</a></li></ul>

Buy Now on CodeCanyon