Surprise Me!

ಸಾವಿನಿಂದ ರಕ್ಷಿಸಿದ ವ್ಯಕ್ತಿಯ ಕಾಲಿಗೆ ಬಿದ್ದು ಕೃತಜ್ಞತೆ ಸಲ್ಲಿಸಿದ ವ್ಯಕ್ತಿ: Watch in video

2026-02-11 23 Dailymotion

<p>ಮೈಸೂರು: ನದಿಯ ನೀರಿನಲ್ಲಿ ಈಜಲಾಗದೇ, ದಡಕ್ಕೂ ಬರಲಾಗದೇ ಪರದಾಡುತ್ತಿದ್ದ ಯುವಕನನ್ನು ವ್ಯಕ್ತಿಯೋರ್ವ ಒಂದು ಬಕೆಟ್​ ಹಾಗೂ ಎಣ್ಣೆ ತುಂಬುದ ಖಾಲಿ ಡಬ್ಬದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.</p><p>ಜೀವ ಉಳಿಸಿಕೊಂಡ ಮಂಜು ತನ್ನನ್ನು ರಕ್ಷಿಸಿದ ವ್ಯಕ್ತಿ ಮಧು ಅವರ ಕಾಲಿಗೆ ನಮಸ್ಕಾರ ಮಾಡಿ, ಪ್ರಾಣ ಉಳಿಸಿದ್ದಕ್ಕೆ ಶರಣು ಎಂದು ಕೃತಜ್ಞತೆ ತಿಳಿಸಿದ್ದಾರೆ. ಕೆಆರ್​​ನಗರ ತಾಲೂಕಿನ ಐತಿಹಾಸಿಕ ಕಪ್ಪಡಿ ಧಾರ್ಮಿಕ ಕ್ಷೇತ್ರದ ಕಾವೇರಿ ನದಿಯಲ್ಲಿ ಅರಸನಕೊಪ್ಪಲು ಗ್ರಾಮದ ಪೂಜಾರಪ್ಪನ ಮಗ ಮಂಜು ಎಂಬುವರು ಈಜಲು ತೆರಳಿದ್ದರು. ಆದರೆ ನದಿ ಮಧ್ಯೆ ನೀರಿನಲ್ಲಿ ಸಿಲುಕಿ ಒದ್ದಾಡಲು ಆರಂಭಿಸಿದ್ದರು. ಇದನ್ನು ಗಮನಿಸಿದ ಹೆಬ್ಬಾಳು ಗ್ರಾಮದ ಸ್ಥಳೀಯ ನಿವಾಸಿ ಮಧು ತಕ್ಷಣ ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ.</p><p>ಒಂದು ಬಕೆಟ್​ ಹಾಗೂ ಎಣ್ಣೆ ತುಂಬುದ ಖಾಲಿ ಡಬ್ಬವನ್ನು ತೆಗೆದುಕೊಂಡು ನದಿಗೆ ಧುಮುಕಿ ಮಂಜುವನ್ನು ರಕ್ಷಿಸಿ, ನದಿಯ ಮಧ್ಯಭಾಗದಿಂದ ದಡಕ್ಕೆ ಕರೆ ತಂದಿದ್ದಾರೆ. ಸಾವಿನ ಕೂಪದಿಂದ ಪಾರಾದ ಮಂಜು ತನ್ನನ್ನು ರಕ್ಷಿಸಿದ ಮಧು ಕಾಲಿಗೆ ಅಲ್ಲೇ ನಮಸ್ಕಾರ ಮಾಡಿ, ಜೀವ ಉಳಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಮಧು ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p><p>ಇದನ್ನೂ ಓದಿ: ಬ್ರೇಕ್ ಫೇಲ್ ಆದ ಬಿಎಂಟಿಸಿ ಬಸ್: ಆಟೋ, ದ್ವಿಚಕ್ರ ವಾಹನಗಳಿಗೆ ಡಿಕ್ಕಿ</a></p>

Buy Now on CodeCanyon