Surprise Me!

ಮೈಸೂರು: ಕೆರೆ ಒತ್ತುವರಿ ತೆರುವುಗೊಳಿಸುವಂತೆ ಶಾಸಕರ ಆಗ್ರಹ

2026-02-12 12 Dailymotion

<p>ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಇತಿಹಾಸ ಪ್ರಸಿದ್ಧ ತಾವರೆ ಕೆರೆಯನ್ನು ಅಕ್ರಮವಾಗಿ ಅತಿಕ್ರಮಣ ಮಾಡಿರುವ ಸ್ಥಳವನ್ನು ತೆರವುಗೊಳಿಸಿ ರಕ್ಷಿಸಬೇಕೆಂದು ಶಾಸಕ ಶ್ರಿವತ್ಸ ಒತ್ತುವರಿ ಮಾಡಿಕೊಂಡಿರುವ ಸ್ಥಳದಲ್ಲೇ ಪತ್ರಿಕಾಗೋಷ್ಠಿ ಮಾಡಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.</p><p>ಮೈಸೂರು ನಗರದಿಂದ ಚಾಮುಂಡಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಬರುವ ತಾವರೆ ಕೆರೆಯ ಸಮೀಪದಲ್ಲಿ ಅಕ್ರಮವಾಗಿ ಕೆರೆಯನ್ನೇ ಒತ್ತುವರಿ ಮಾಡಿ ಆ ಜಾಗದಲ್ಲಿ ಅಕ್ರಮವಾಗಿ ತಂತಿಬೇಲಿ ಹಾಕುತ್ತಿದ್ದಾರೆ. ಇದು ದಾಖಲೆಯ ಪ್ರಕಾರ ಕುರುಬರಲ್ಲಿ ಸರ್ವೇ ನಂಬರ್​ನಲ್ಲಿದ್ದು, ಈ ಕೆರೆ ಜಾಗವನ್ನು ಪ್ರಭಾವಿ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ, ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಮುಡಾ ಅಧಿಕಾರಿಗಳು ಮೌನವಾಗಿ ಇರುವುದು ಸಂಶಯಕ್ಕೆ ಕಾರಣವಾಗಿದೆ. ಇದರ ಹಿಂದೆ 100 ಕೋಟಿ ವ್ಯವಹಾರ ಆಗಿದೆ ಎಂದು ಆರೋಪಿಸಿದ್ದಾರೆ.</p><p>ಕೂಡಲೇ ಈ ಕೆರೆ ಜಾಗವನ್ನು ಪ್ರಭಾವಿ ವ್ಯಕ್ತಿಗಳಿಂದ ಬಿಡಿಸಿಕೊಡಬೇಕು. ಹಾಗೂ ಹಿಂದಿನ ದಾಖಲೆಯ ಪ್ರಕಾರ ಈ ಸ್ಥಳ ಕೆರೆ ಎಂದು ಗುರುತಾಗಿದ್ದು, ಇದನ್ನು ಉಳಿಸಬೇಕೆಂದು ಸ್ಥಳದಲ್ಲಿ ನಾಗರಿಕರು ಹೇಳುತ್ತಿದ್ದು, ಕೂಡಲೇ ಈ ಸ್ಥಳವನ್ನು ಜಿಲ್ಲಾಡಳಿತ ತಮ್ಮ ವಶಕ್ಕೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ.</p><p>ಇದನ್ನೂ ನೋಡಿ: ಒತ್ತುವರಿ ಆರೋಪ: ಯಶ್ ತಾಯಿ ಪುಷ್ಪಾ - ಜಿಪಿಎ ಹೋಲ್ಡರ್ ದೇವರಾಜು ನಡುವೆ ಮಾತಿನ ಚಕಮಕಿ.!</a></p>

Buy Now on CodeCanyon