<p>ದಾವಣಗೆರೆ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ನಾಲ್ಕು ಕಾರು ಹಾಗೂ ಒಂದು ಕ್ರೂಸರ್ ಸುಟ್ಟು ಕರಕಲಾದ ಘಟನೆ ನಗರದ ಹಳೇ ಪಿಬಿ ರಸ್ತೆಯ ಎಲ್ಐಸಿ ಎದುರಿರುವ ಮಾರುತಿ ಗ್ಯಾರೇಜ್ನಲ್ಲಿ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದರು. </p><p>ಬೇರೆ ಕಡೆ ಬೆಂಕಿ ಆವರಿಸದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಕ್ರಮ ವಹಿಸಿದರು. ಅರುಣ್ ಎಂ.ಪಿ ಎಂಬುವರಿಗೆ ಸೇರಿದ ಗ್ಯಾರೇಜ್ ಇದಾಗಿದ್ದು, ಒಂದು ಬುಲೇರೋ, ಇಕಾನ್, ಐ-20 ಕಾರು ಹಾಗೂ ಕ್ರೂಸರ್ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ. ಅಕ್ಕ ಪಕ್ಕದಲ್ಲಿ ಹತ್ತಾರು ಶಾಪ್, ಗ್ಯಾರೇಜ್, ಶೋ ರೂಮ್ ಇದ್ದ ಹಿನ್ನೆಲೆ ಜನ ಕೆಲಕಾಲ ಆತಂಕಗೊಂಡಿದ್ದರು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. </p><p>ಗಾಂಧಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿದೆ. ಗ್ಯಾರೇಜ್ಗೆ ಬೆಂಕಿ ಹೇಗೆ ಹೊತ್ತಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಬೇಕಿದೆ. ಇದೀಗ ಬೇಸಿಗೆ ಕಾಲ ಆರಂಭ ಹಿನ್ನೆಲೆ ಅಂಗಡಿ ಮುಂಗಟ್ಟು, ಗ್ಯಾರೇಜ್ ಮುಂತಾದ ಅಂಗಡಿ ಮಾಲೀಕರು ಕ್ರಮವಹಿಸಬೇಕಿದೆ. ಮಾಲೀಕ ಅರುಣ್ಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. </p><p>ಇವುಗಳನ್ನೂ ಓದಿ:</p><ul><li>ಬೆಳ್ತಂಗಡಿ: ಹೀಲಿಯಂ ಗ್ಯಾಸ್ ಸೋರಿಕೆಯಿಂದ ಅಗ್ನಿ ಅವಘಡ: ಅಂಗಡಿ ಸುಟ್ಟು ಭಸ್ಮ</a></li><li>ತುಮಕೂರು: ತ್ಯಾಜ್ಯ ಮರುಬಳಕೆ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ</a></li></ul>
