Surprise Me!

ತುಮಕೂರು: ರಾಜಕಾಲುವೆಗಳಿಗೆ ಕೆಮಿಕಲ್ ತ್ಯಾಜ್ಯ ಹರಿಸುತ್ತಿದ್ದ ಎರಡು ಟ್ಯಾಂಕರ್​ಗಳ ಜಪ್ತಿ

2026-02-18 11 Dailymotion

<p>ತುಮಕೂರು: ತುಮಕೂರು ನಗರ ವ್ಯಾಪ್ತಿಯ ರಾಜಕಾಲುವೆಗಳಿಗೆ ಕಾರ್ಖಾನೆಗಳ ಕೆಮಿಕಲ್​ ತ್ಯಾಜ್ಯವನ್ನು ಹರಿಸುತ್ತಿದ್ದ ಎರಡು ಟ್ಯಾಂಕರ್​ಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. </p><p>ಕಾರ್ಖಾನೆಗಳ ಕೆಮಿಕಲ್​ ತ್ಯಾಜ್ಯವನ್ನು ರಾಜಕಾಲುವೆಗೆ ಸುರಿಯುತ್ತಿದ್ದರಿಂದ ಸುತ್ತಮುತ್ತಲಿನ ಪರಿಸರ ಕಲುಷಿತಗೊಂಡಿದೆ. ಈ ಬಗ್ಗೆ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವೀರ ಸಾಗರ ಗ್ರಾಮದಲ್ಲಿ ಎರಡು ಟ್ಯಾಂಕರ್​ಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಟ್ಯಾಂಕರ್​ ಗಳನ್ನು ಜಪ್ತಿ ಮಾಡಿ ಮಹಾನಗರ ಪಾಲಿಕೆ ಆವರಣದಲ್ಲಿ ನಿಲ್ಲಿಸಲಾಗಿದೆ. ಇನ್ನು ಸ್ಥಳದಲ್ಲಿ ಟ್ಯಾಂಕರ್ ಚಾಲಕರು ವಾಹನ ಜಪ್ತಿಯಾಗುತ್ತಿದ್ದಂತೆ ಪರಾರಿಯಾಗಿದ್ದಾರೆ. </p><p>ಒಂದು ವಾರದ ಹಿಂದೆ ಸಾರ್ವಜನಿಕರೊಬ್ಬರು ದೂರು ದಾಖಲಿಸಿದ್ದರು. ಈ ಮಾಹಿತಿ ಮೇರೆಗೆ ಒಂದು ಚೆಕ್ಕಿಂಗ್​ ಟೀಮ್​ನ್ನು ಇಟ್ಟಿದ್ದೆವು. 2-3 ರಾತ್ರಿ ನಮಗೆ ಯಾವುದೇ ಚಟುವಟಿಕೆ ಕಂಡು ಬರಲಿಲ್ಲ. ಆದರೆ, ನಿನ್ನೆ ಆ ಸ್ಥಳದಲ್ಲಿ ನಮ್ಮ ಟೀಂ ಇದ್ದು ಕಾರ್ಯಾಚರಣೆ ನಡೆಸಿದೆ. ಟ್ಯಾಂಕರ್ ವಾಹನದಲ್ಲಿ ಫಾರ್ಮಸಿಟಿಕಲ್ ಕಂಪನಿಯೊಂದರ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಲಾಗುವುದು. ಅಲ್ಲದೆ ಈಗಾಗಲೇ ಒಂದು ಟ್ಯಾಂಕರ್​ನಲ್ಲಿದ್ದ 500 ಲೀಟರ್​ನಷ್ಟು ಕೆಮಿಕಲ್ ತ್ಯಾಜ್ಯವನ್ನು ಸುರಿದಿದ್ದಾರೆ ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶುಭ ತಿಳಿಸಿದ್ದಾರೆ.</p><p>ಇದನ್ನೂ ಓದಿ: ಉಡುಪಿ: ಭಾರತದ ನೌಕಾಸೇನೆ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ; ಐದನೇ ಆರೋಪಿ ಬಂಧನ</a></p>

Buy Now on CodeCanyon