Surprise Me!

ಅಕಾಲಿಕ ಮಳೆ: ಒಕ್ಕಣೆಗೆ ಹಾಕಿದ್ದ ರಾಗಿ ಬೆಳೆ ಸಂಪೂರ್ಣ ಹಾಳು, ರೈತರ ಕಣ್ಣೀರು

2026-02-23 18 Dailymotion

<p>ಮೈಸೂರು: ಸಾಲಿಗ್ರಾಮ ತಾಲೂಕಿನ ಕಾವಲು ಹೊಸೂರು ಗ್ರಾಮ ಸೇರಿದಂತೆ ಹಲವೆಡೆ ಶನಿವಾರ ಸಂಜೆ ಅಕಾಲಿಕ ಮಳೆಯಾಗಿದ್ದು, ಕಣದಲ್ಲಿ ಒಕ್ಕಣೆಗೆ ಹಾಕಿದ್ದ ರಾಗಿ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಮಳೆಯಿಂದ ತಮಗೆ ಭಾರಿ ನಷ್ಟ ಆಗಿದೆ ಎಂದು ರೈತರು ಬೇಸರ ಹೊರಹಾಕಿದ್ದಾರೆ.</p><p>ಸಾಲ-ಶೂಲ ಮಾಡಿ ರಾಗಿ ಬಿತ್ತಿ-ಬೆಳೆದು ಕಣಕ್ಕೆ ತಂದು ಹಾಕಿದ್ದೆವು. ಬಿಳಿಗ್ಗೆ ಒಕ್ಕಣೆ ಮಾಡಲಿದ್ದೆವು. ಅಷ್ಟರಲ್ಲಿ ರಾತ್ರಿ ಸುರಿದ ಮಳೆಗೆ ಹೀಗಾಗಿದೆ. ಹದಮಾಡಿದ ರಾಗಿ ಕಣ ಮಳೆ ನೀರು ಪಾಲಾಗಿದೆ ಎಂದು ಗ್ರಾಮದ ಹುಚ್ಚೇಗೌಡ, ರಾಮೇಗೌಡ, ಸಣ್ಣಸ್ವಾಮಿ ನೋವು ತೋಡಿಕೊಂಡರು.</p><p>''10 ಎಕರೆಯಲ್ಲಿ ರಾಗಿ ಹಾಕಿದ್ದೆವು. ಎರಡು ದಿನಗಳ ಹಿಂದೆಯಷ್ಟೇ ಟ್ರ್ಯಾಕ್ಟರ್​ ಮೂಲಕ ಕಣಕ್ಕೆ ತಂದು ಹಾಕಿದ್ದೆವು. ಬೆಳಿಗ್ಗೆ ಬಂದು ಒಕ್ಕಣೆ ಮಾಡಿದರಾಯಿತು ಅಂತ ಅಂದುಕೊಂಡಿದ್ದೆವು. ಆದರೆ, ರಾತ್ರಿ ಸುರಿದ ಮಳೆಗೆ ಎಲ್ಲ ಹಾನಿಯಾಗಿದೆ. ಎಲ್ಲ ಮಾಲು ಕೊಚ್ಚಿ ಹೋಗಿದೆ. ಸುಮಾರು 200 ಕ್ವಿಂಟಲ್ ರಾಗಿ ಹಾಗೂ ರಾಗಿ ಹುಲ್ಲು ನೀರು ಪಾಲಾಗಿದೆ. ಹೊಲದಲ್ಲಿದ್ದ ರಾಗಿ ಕೂಡ ಮಳೆಗೆ ಸಿಲುಕಿದೆ. ಕೃಷಿ ಮಾರುಕಟ್ಟೆಯಿಂದ ನಮಗೆ 81 ಕ್ವಿಂಟಲ್​ ಪರ್ಮಿಟ್​ ಸಿಕ್ಕಿತ್ತು. ರಾಗಿಯ ಜೊತೆಗೆ ದನಕರುಗಳಿಗಾಗಿ ಹಾಕುವ ರಾಗಿಯ ಹುಲ್ಲು ಸಹ ಮಳೆಯ ಪಾಲಾಗಿದೆ. ಈ ಅಕಾಲಿಕ ಮಳೆಯಿಂದ ನಮಗೆ ಸುಮಾರು 7-8 ಲಕ್ಷ ರೂ. ಲಾಸ್​ ಆಗಿದೆ. ಸರ್ಕಾರ ಈ ನಷ್ಟವನ್ನು ತುಂಬಿಕೊಡುವಂತೆ'' ರೈತ ರಾಮೇಗೌಡ ಮನವಿ ಮಾಡಿದ್ದಾರೆ. </p><p>ಇದನ್ನೂ ಓದಿ: ಏಪ್ರಿಲ್​ ಬಿಸಿಲು ಫೆಬ್ರವರಿಯಲ್ಲೇ ದಾಖಲು: ಈ ವರ್ಷ ಅಧಿಕ ತಾಪಮಾನದ ಮುನ್ಸೂಚನೆ</a></p>

Buy Now on CodeCanyon