<p>ಮೈಸೂರು: ಮಾ.30ರಂದು ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿಯ ಗೌತಮ ಪಂಚ ಮಹಾರಥೋತ್ಸವದ ಹಿನ್ನೆಲೆಯಲ್ಲಿ ಇಂದು ದೇವಾಲಯದ ಆವರಣದಲ್ಲಿ ರಥ ಚಲನ ಮಹೋತ್ಸವಕ್ಕೆ ಚಾಲನೆ ದೊರೆಯಿತು. </p><p>ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಮತ್ತು ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ರಥಚಲನ ಮಹೋತ್ಸವದಲ್ಲಿ 5 ರಥಗಳಿಗೆ ಪೂಜೆ ಸಲ್ಲಿಸಿ, ರಥ ಕಟ್ಟುವ ಕೆಲಸಕ್ಕೆ ಚಾಲನೆ ನೀಡಲಾಯಿತು.</p><p>ಶ್ರೀ ನಂಜುಂಡೇಶ್ವರ ಸ್ವಾಮಿ ಮತ್ತು ಪಾರ್ವತಿ ಅಮ್ಮನವರಿಗೆ ಕ್ಷೀರಾಭಿಷೇಕ, ಫಲಪಂಚಾಮೃತ ಅಭಿಷೇಕ, ನಿತ್ಯೋತ್ಸವ ಮತ್ತು ಮೂಲದೇವರ ಪೂಜೆ ನೆರವೇರಿಸಲಾಯಿತು. ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ, ಗಣಪತಿ ಪೂಜೆ ಹಾಗೂ ನವಗ್ರಹ ಪೂಜೆ ಸಲ್ಲಿಸಿ, ಪಟ್ಟಿಗೆ ನವಧಾನ್ಯ ಪೂಜೆ ಸಲ್ಲಿಸಲಾಯಿತು. </p><p>ನಂಜನಗೂಡು ದೊಡ್ಡ ಜಾತ್ರಾ ಮಹೋತ್ಸವದಲ್ಲಿ ಮೊದಲಿಗೆ ಶ್ರೀ ನಂಜುಂಡೇಶ್ವರ ಸ್ವಾಮಿ ರಥೋತ್ಸವ, ಪಾರ್ವತಿ ಅಮ್ಮನವರ ರಥೋತ್ಸವ, ಗಣಪತಿ, ಚಂಡಿಕೇಶ್ವರ ಮತ್ತು ಸುಬ್ರಮಣ್ಯ ರಥೋತ್ಸವಗಳನ್ನು ಮಾಡಲಾಗುತ್ತದೆ.</p><p>ಇನ್ನು 25 ದಿನಗಳ ಒಳಗಾಗಿ ಐದು ರಥಗಳು ಸಿದ್ಧಗೊಳ್ಳಲಿವೆ.</p><p>ಇದನ್ನೂ ಓದಿ: ಉಡುಪಿ ಸಾವಿರಾರು ಜನರಿಂದ ಜನಪದ ಹೋಳಿ: ಇಲ್ಲಿ ಬಣ್ಣಗಳ ಎರಚಾಟವಿಲ್ಲ! - HOLI CELEBRATION WITHOUT COLOR</a></p>
