ಸ್ಲೀಪರ್ ಕೋಚ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿಕೊಂಡ ಖದೀಮರು ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಎಲ್ಲರೂ ನಿದ್ರೆಯಲ್ಲಿದ್ದ ಸಮಯದಲ್ಲಿ ಹೊಂಚು ಹಾಕಿ ಖದೀಮರು ಚಿನ್ನ ಎಗರಿಸಿರುವುದಾಗಿ ತಿಳಿದುಬಂದಿದೆ. ಪ್ರಯಾಣಿಕರು ಎಚ್ಚರವಾದ ನಂತರ ಕಳ್ಳತನವಾಗಿರುವುದು ಗೊತ್ತಾಗಿ ಶಾಕ್ ಆಗಿದ್ದಾರೆ. ಈ ಘಟನೆ ಬಸ್ ಪ್ರಯಾಣದ ಭದ್ರತೆ ಬಗ್ಗೆ ಮತ್ತೆ ಪ್ರಶ್ನೆ ಹುಟ್ಟಿಸಿದೆ. ಖದೀಮರು ಹೇಗೆ ಪ್ಲಾನ್ ಮಾಡಿ ಚಿನ್ನ ಎಗರಿಸಿದರು ಎಂಬುದು ಇದೀಗ ಸಿಸಿಟಿವಿ ಹಾಗೂ ಪೊಲೀಸ್ ತನಿಖೆಯಿಂದ ಬಹಿರಂಗವಾಗುತ್ತಿದೆ.<br />
