Surprise Me!

ಮೈಸೂರು: ಮೇವಿಗಾಗಿ ಬಂದು ರೈಲ್ವೆ ಬ್ಯಾರಿಕೇಡ್​ಗೆ ಸಿಲುಕಿ ಒದ್ದಾಡಿದ ಸಲಗ

2026-03-19 11 Dailymotion

<p>ಮೈಸೂರು : ನಾಗರಹೊಳೆ ಉದ್ಯಾನದಿಂದ ಆಹಾರ ಅರಸಿ ಹೊರಬಂದ ಕಾಡಾನೆಯೊಂದು ಮರಳಿ ಕಾಡಿಗೆ ಸೇರಲು ರೈಲ್ವೆ ಬ್ಯಾರಿಕೇಡ್ ಮೂಲಕ ನುಸುಳಲು ಹೋಗಿ, ಕಂಬಿಗೆ ಸಿಲುಕಿ ಕೆಲ ಹೊತ್ತು ಒದ್ದಾಡಿದ ಘಟನೆ ಹುಣಸೂರು ವನ್ಯಜೀವಿ ವಲಯದ ಐಯ್ಯನಕೆರೆ ಹಾಡಿ ಬಳಿ ನಡೆದಿದೆ.  </p><p>ಸುಮಾರು‌ 25-30 ವರ್ಷದ ಸಲಗವೊಂದು ಆಹಾರ ಅರಸಿ ಬಂದು, ಜಮೀನಿನಲ್ಲಿ ಬೆಳೆದಿದ್ದ ಫಸಲುಗಳನ್ನು ತಿಂದು ತೇಗಿದೆ‌. ನಂತರ ಅದನ್ನು ಕಂಡಿರುವ ಜನರು ಕೂಗಾಟ ನಡೆಸಿ ಮತ್ತೆ ಕಾಡಿನತ್ತ ಓಡಿಸಲು ಯತ್ನಿಸಿದ್ದಾರೆ.  </p><p>ಜನರ ಕೂಗಾಟಕ್ಕೆ ಗಾಬರಿಯಾದ ಆನೆ ಕಾಡಿನೊಳಗೆ ಹೋಗುವ ರಭಸದಲ್ಲಿ‌ ರೈಲ್ವೆ ಬ್ಯಾರಿಕೇಡ್ ತಡೆಗೋಡೆ ಕಂಬಿ ನುಸುಳಲು ಹೋಗಿ ಸಿಲುಕಿಕೊಂಡಿದೆ. ನಂತರ ಘೀಳಿಡುತ್ತ ಒದ್ದಾಡಿ ಕೊನೆಗೂ ಕಾಡಿಗೆ ಹೋಗಿದೆ. ಸ್ಥಳಕ್ಕೆ ಆನೆ ಕಾವಲು ಪಡೆ, ಅರಣ್ಯ ಸಿಬ್ಬಂದಿ ಧಾವಿಸಿದ್ದರು ಎಂದು ಆ‌ರ್​ಎಫ್‌ಒ ಸುಬ್ರಮಣಿ ತಿಳಿಸಿದ್ದಾರೆ. </p><p>'ಜನರ ಕೂಗಾಟದಿಂದ ಗಾಬರಿಗೊಂಡಿದ್ದ ಆನೆಯು ಕಾಡಿನೊಳಗೆ ಸೇರುವ ಭರದಲ್ಲಿ ರೈಲ್ವೆ ಬ್ಯಾರಿಕೇಡ್​ನ ಕೆಳಗೆ ಸಿಲುಕಿಕೊಂಡಿತ್ತು. ಕೊನೆಗೂ ಮೇಲೆದ್ದು ಉದ್ಯಾನವನ ಸೇರಿಕೊಂಡಿದೆ' ಎಂದು ಎಸಿಎಫ್ ಲಕ್ಷ್ಮಿಕಾಂತ್ ವಿವರಣೆ ನೀಡಿದ್ದಾರೆ.</p><p>ಇದನ್ನೂ ಓದಿ : ಚಿಕ್ಕಮಗಳೂರು: ಕಾಡುಕೋಣಗಳ ಹಿಂಡು ಮತ್ತೆ ಪ್ರತ್ಯಕ್ಷ - WILD BUFFALOES</a></p>

Buy Now on CodeCanyon