Surprise Me!

ಹಿಂದೂ, ಮುಸ್ಲಿಂ ಸೌಹಾರ್ದಕ್ಕೆ ಸಾಕ್ಷಿಯಾದ ಬಂಟ್ವಾಳದ ನಂದಾವರ

2026-03-19 2 Dailymotion

<p>ಬಂಟ್ವಾಳ: ಮನುಷ್ಯ ಮನುಷ್ಯನ ನಡುವೆ ದ್ವೇಷ, ಅಪನಂಬಿಕೆಗಳು ಹೆಚ್ಚಾಗಿರುವ ಹೊತ್ತಿನಲ್ಲಿ ಹಿಂದೂ ಮುಸ್ಲಿಂ ನಡುವಿನ ಸೌಹಾರ್ದಕ್ಕೆ ಬಂಟ್ವಾಳ ತಾಲೂಕಿನ ನಂದಾವರ ಪರಿಸರ ಸಾಕ್ಷಿಯಾಯಿತು.</p><p>ದೇವಸ್ಥಾನ, ಮಸೀದಿ ಎರಡೂ ಇರುವ ಈ ಪರಿಸರದಲ್ಲಿ ಹಿಂದೆ ಇದ್ದ ಅರಸರ ಕಾಲದಿಂದಲೂ ನಡೆಯುತ್ತಿದ್ದ ಪದ್ಧತಿಯನ್ನು ಈಗಲೂ ಮುಂದುವರಿಸಿಕೊಂಡು ಬರಲಾಗಿದೆ. ನಂದಾವರ ದೇವಸ್ಥಾನ ಸಮೀಪವಿರುವ ಕೇಂದ್ರ ಜುಮ್ಮಾ ಮಸೀದಿಯಲ್ಲಿ ದೈವಕ್ಕೆ ಸೀಯಾಳ ನೀಡುವ ಪದ್ಧತಿಯನ್ನು ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ. </p><p>ಮಸೀದಿ ಸಮೀಪ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಮಂಜದಗೋಳಿ ಎಂಬಲ್ಲಿನ ಜಾತ್ರೆಗೆ ಸಜೀಪನಡು ಮೂಲಸ್ಥಾನದಿಂದ ಭಂಡಾರ ಆಗಮಿಸುತ್ತದೆ. ಈ ವೇಳೆ ದೈವ ಮಂಜದಗೋಳಿ ಕ್ಷೇತ್ರಕ್ಕೆ ಆಗಮಿಸುವ ಮೊದಲು ದಾರಿಯಲ್ಲಿ ಸಿಗುವ ಕೇಂದ್ರ ಜುಮ್ಮಾ ಮಸೀದಿಯ ನಾಲ್ಕು ಮೆಟ್ಟಿಲು ಹತ್ತಿ, ಸೀಯಾಳ ಸ್ವೀಕರಿಸುವುದು ವಾಡಿಕೆ. ಮಾರ್ಚ್ 17ರಂದು ರಾತ್ರಿ ನಡೆದ ಜಾತ್ರೆಯ ವೇಳೆ ಭಂಡಾರ ಆಗಮನ ಸಂದರ್ಭ ಮಸೀದಿಯ ಮೆಟ್ಟಿಲು ಹತ್ತಿ ಸೀಯಾಳ ಸ್ವೀಕರಿಸಿತು. ಹಿಂದೂ ಮತ್ತು ಮುಸ್ಲಿಂ ಬಾಂಧವರು ಈ ಸಂದರ್ಭಕ್ಕೆ ಸಾಕ್ಷಿಯಾದರು.</p><p>ಸಜೀಪನಡುವಿನ ನಾಲ್ಕೈತ್ತಾಯ ದೈವ ಸ್ಥಾನದಿಂದ ಸುಮಾರು 6 ಕಿ.ಮೀ. ದೂರ ಮಂಜದಗೋಳಿಗೆ ನಡೆದುಕೊಂಡು ದೈವ ಬರುವುದು ವಾಡಿಕೆ. ಈ ಸಂದರ್ಭ ಮಸೀದಿಗೆ ಭೇಟಿ ನೀಡುವ ಕಾರ್ಯವೂ ಪರಂಪರೆಯಿಂದ ನಡೆದುಕೊಂಡು ಬಂದಿದೆ.</p><p>ಇದನ್ನೂ ಓದಿ: ಯುಗಾದಿ ದಿನ ಪಂಚಾಂಗ ಪೂಜೆ ಯಾಕೆ ಮಾಡುತ್ತಾರೆ?; ಇಲ್ಲಿದೆ ಜ್ಯೋತಿಷಿಗಳ ವಿವರಣೆ!</a></p>

Buy Now on CodeCanyon