Surprise Me!

ರಾಯಚೂರು: ಸರ್ಕಾರದ ಯೋಜನೆಗಳ ಹೆಸರಿನಲ್ಲಿ ಹೊಲಿಗೆ ಯಂತ್ರ ನೀಡುವುದಾಗಿ ವಂಚನೆ ಆರೋಪ

2026-03-25 6 Dailymotion

<p>ರಾಯಚೂರು: ಪ್ರಧಾನಮಂತ್ರಿ ವಿಶ್ವಕರ್ಮ ಹಾಗೂ ಸ್ವನಿಧಿ ಯೋಜನೆಗಳ ಹೆಸರಿನಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡುವುದಾಗಿ ಹಣವನ್ನು ಪಾವತಿಸಿಕೊಂಡು, ಈಗ ಕಚೇರಿಗೆ ಯಾಕೆ ಬಂದಿದ್ದೀರಿ ಎಂದು ಆವಾಜ್ ಹಾಕುವ ಮೂಲಕ ನಮ್ಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ನೂರಾರು ಮಹಿಳೆಯರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.</p><p>ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಮೀಪದ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏರೋ ಗ್ಲೋಬಲ್​  ಎಂಬ ಸಂಸ್ಥೆಯ ವಿರುದ್ಧ ಮಹಿಳೆಯರು ವಂಚನೆ ಆರೋಪ ಮಾಡಿದ್ದಾರೆ. ಜಿಲ್ಲೆಯ ವಿವಿಧ ಗ್ರಾಮಗಳ ಮಹಿಳೆಯರಿಗೆ ಕರೆ ಮಾಡಿ ನಿಮಗೆ ಹೊಲಿಗೆ ಯಂತ್ರ ಮಂಜೂರಾಗಿದೆ, ಖಾತೆ ತೆರೆಯಬೇಕು ಎಂದು ಹೇಳಿ ಕಚೇರಿಗೆ ಕರೆಯಲಾಗುತ್ತಿತ್ತು. ಕಳೆದ ಹಲವು ತಿಂಗಳಿಂದ ಮಹಿಳೆಯರು ಕಚೇರಿಗೆ ಆಗಮಿಸಿ ನೋಂದಣಿ ಮಾಡಿಸಿಕೊಂಡು ಕಾದು ಕುಳಿತಿದ್ದರು, ನಂತರ ಸಂಸ್ಥೆಯ ಸಿಬ್ಬಂದಿ ನಮಗೆ ಸಂಬಂಧವಿಲ್ಲ, ಹೊರಗೆ ಹೋಗಿ ಎಂದು ಹೇಳಿದ ಹಿನ್ನೆಲೆಯಲ್ಲಿ ಮಹಿಳೆಯರು ಸಂಸ್ಥೆಯ ಅಧಿಕಾರಿಗಳ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.</p><p>ವಿಶ್ವಕರ್ಮ ಯೋಜನೆಯಡಿ ಯಾವುದೇ ಅಧಿಕೃತ ಅನುಮತಿ ಇಲ್ಲದೇ  ತಲಾ 400 ರೂ. ಹಣವನ್ನು ಸಂಗ್ರಹಿಸಿರುವ ಆರೋಪ ಕೇಳಿಬಂದಿದೆ. ಖಾತೆ ಜೋಡಣೆ ಮಾಡಿದರೆ ಮಾತ್ರ ಹೊಲಿಗೆ ಯಂತ್ರ ನೀಡಲಾಗುತ್ತದೆ ಎಂದು ನಂಬಿಸಲಾಗುತ್ತಿತ್ತು ಎಂದು ಮಹಿಳೆಯರು ದೂರಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗೆ ಯಾವುದೇ ಸಂಸ್ಥೆಯನ್ನು ನೇಮಕ ಮಾಡಿಲ್ಲದಿದ್ದರೂ ಈ ರೀತಿಯಾಗಿ ಹಣ ವಸೂಲಿ ಮಾಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.</p><p>ಈ ಸಂಬಂಧ ಮಹಿಳೆಯರು ಜಿಲ್ಲಾ ಪಂಚಾಯಿತಿ ಕಚೇರಿಗೆ ತೆರಳಿ ದೂರು ನೀಡಿದ ನಂತರ, ಸಹಾಯಕ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಚೇರಿಗೆ ಬೀಗ ಹಾಕುವಂತೆ ಸೂಚನೆ ನೀಡಲಾಗಿದ್ದು, ಸಂಸ್ಥೆಯ ಕಾರ್ಯಚಟುವಟಿಕೆ, ಪರವಾನಗಿ ಹಾಗೂ ಫಲಾನುಭವಿಗಳ ಆಯ್ಕೆ ಕುರಿತು ದಾಖಲೆಗಳನ್ನು ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.</p><p>ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಹಲವಾರು ಮಹಿಳೆಯರು ಕಚೇರಿ ಬಳಿ ಜಮಾಯಿಸಿ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ.</p><p>ಇದನ್ನೂ ಓದಿ: ದಾವಣಗೆರೆ: ಹರಿಹರ ಪಂಚಮಸಾಲಿ ಮಠದಲ್ಲಿ ಲೆಕ್ಕಪತ್ರಕ್ಕಾಗಿ ಭಕ್ತರ ಪಟ್ಟು</a></p>

Buy Now on CodeCanyon