Surprise Me!

ಪೆಟ್ರೋಲ್​, ಡೀಸೆಲ್​ ಕೊರತೆ ವದಂತಿ: ಬಂಕ್​ಗಳ ಮುಂದೆ ವಾಹನ ಸವಾರರ ದಂಡು

2026-03-26 2 Dailymotion

<p>ರಾಯಚೂರು: ಇರಾನ್–ಇಸ್ರೇಲ್ ಯುದ್ಧದಿಂದ ಪೆಟ್ರೋಲ್ ಕೊರತೆಯಾಗಲಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಹನ ಸವಾರರು ಪೆಟ್ರೋಲ್ ಬಂಕ್‌ಗಳತ್ತ ಮುಗಿಬಿದ್ದ ದೃಶ್ಯ ಕಳೆದ ರಾತ್ರಿ ಕಂಡುಬಂತು.</p><p>ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಬಂಕ್‌ಗಳೆದುರು ತಡರಾತ್ರಿವರೆಗೂ ಸಾಲಿನಲ್ಲಿ ನಿಂತ ಜನರು ಇಂಧನ ಪಡೆಯಲು ಹರಸಾಹಸಪಟ್ಟರು. ವದಂತಿಯಿಂದ ಆತಂಕಗೊಂಡು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪೆಟ್ರೋಲ್ ಸಂಗ್ರಹಿಸಲು ಮುಂದಾದ ಕಾರಣ ಕೆಲವೆಡೆ ತಾತ್ಕಾಲಿಕವಾಗಿ ಇಂಧನ ಕೊರತೆ ಉಂಟಾಗಿ ಬಂಕ್‌ಗಳಲ್ಲಿ ಪೆಟ್ರೋಲ್ ಖಾಲಿಯಾಗಿದೆ.</p><p>ಈ ಕುರಿತು ಜಿಲ್ಲಾಧಿಕಾರಿ ನಿತೀಶ್.ಕೆ. ಅವರು ಮಾತನಾಡಿ, ಗೃಹ ಬಳಕೆಯ ಅಡುಗೆ ಅನಿಲ ಕೊರತೆಯಿಲ್ಲ. ಬುಕಿಂಗ್ ನಂತರ ನಿಗದಿತ ಅವಧಿಯಲ್ಲಿ ಸಿಲಿಂಡರ್ ದೊರೆಯಲಿದೆ. ಅಲ್ಲದೇ ಅಗತ್ಯಕ್ಕಿಂತ ಹೆಚ್ಚು ಸಂಗ್ರಹಣೆ ಮಾಡಿಕೊಳ್ಳಲಾಗುತ್ತಿದೆ. ಇತ್ತ ಪೆಟ್ರೋಲ್ ಸಿಗುವುದಿಲ್ಲ ಎನ್ನುವ ವಂದತಿಯಿಂದ ಜನರು ಪೆಟ್ರೋಲ್​ಗಾಗಿ ಕ್ಯಾನ್, ಡಬ್ಬಿಗಳಲ್ಲಿ ಹಾಕಿಸಿಕೊಂಡು ಅವಶ್ಯಕತೆಗಿಂತ ಹೆಚ್ಚು ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಅಂತಹ ಯಾವುದೇ ಇಂಧನ ತೊಂದರೆಯಿಲ್ಲ. ಯಾವುದೇ ವಂದತಿಗೆ ಕಿವಿಕೊಡಬೇಡಿ ಎಂದು ತಿಳಿಸಿದರು.</p><p>ಸುಳ್ಳು ವಂದತಿ ಹಬ್ಬಿಸುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಮತ್ತು ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಅಕ್ರಮವಾಗಿ ಮಾರಾಟ ಮಾಡಿದಲ್ಲಿ, ಅಂತಹವರ ವಿರುದ್ಧವೂ ಕಠಿಣ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದರು. </p><p>ಇದನ್ನೂ ನೋಡಿ: ಹೆದ್ದಾರಿ ಅಕ್ಕಪಕ್ಕದ ಪೆಟ್ರೋಲ್ ಬಂಕ್​ಗಳಲ್ಲಿ ನೋ ಸ್ಟಾಕ್: ವದಂತಿಗಳಿಗೆ ಕಿವಿಗೊಡದಂತೆ ಡಿಸಿ ಮನವಿ</a></p>

Buy Now on CodeCanyon