<p>ದಾವಣಗೆರೆ : ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ಇಂದು ಭರತ್ ಕಾಲೋನಿ, ಹೆಚ್ಕೆಆರ್ ನಗರ, ಕಬ್ಬೂರು ಬಸಪ್ಪ ನಗರದಲ್ಲಿ ಅದ್ದೂರಿ ಚುನಾವಣಾ ಪ್ರಚಾರ ನಡೆಸಿದರು. </p><p>ಈ ವೇಳೆ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಸ್ಥಳೀಯರು ಆರತಿ ಬೆಳಗುವ ಮೂಲಕ ಹಾಗೂ ಶ್ರೀರಾಮನ ಚಿತ್ರ ನೀಡುವ ಮೂಲಕ ವಿಶೇಷವಾಗಿ ಆತ್ಮೀಯ ಸ್ವಾಗತ ಕೋರಿದರು. ಇದಾದ ನಂತರ ಚುನಾವಣ ಪ್ರಚಾರದ ವಾಹನವನ್ನು ಏರಿದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ಮತದಾರರಿಗೆ ಕೈ ಮುಗಿದು ಮತಯಾಚಿಸಿದರು. </p><p>ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕೆಲಸಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿ ಮತಯಾಚಿಸಲಾಯಿತು. ಈ ವೇಳೆ, ಯುವಕರು ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಬೆಂಬಲ ಸೂಚಿಸಿ ಸಂತಸ ವ್ಯಕ್ತಪಡಿಸಿದರು. </p><p>ಈ ಸಂದರ್ಭದಲ್ಲಿ ಯಶವಂತ ರಾವ್ ಜಾಧವ್, ಬಿ. ಜಿ. ಅಜಯ್ ಕುಮಾರ್, ರಾಜನಹಳ್ಳಿ ಶಿವಕುಮಾರ್, ದೇವರಮನಿ ಶಿವಕುಮಾರ್, ಗೌತಮ್ ಜೈನ್ ಪ್ರಚಾರಕ್ಕೆ ಸಾಥ್ ನೀಡಿದರು.</p><p>ಯುವಕರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ಗೆಲುವು ಸಾಧಿಸಲಿ ಎಂದು ನಗರ ದೇವತೆ ದುರ್ಗಾಂಭಿಕ ದೇವಿಗೆ ದೀಡ್ ನಮಸ್ಕಾರ ಹಾಕಿದರು. </p><p>ಈ ವೇಳೆ, ಬೇವಿನ ಸೊಪ್ಪು ಹಿಡಿದ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಉರುಳು ಸೇವೆಯೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ನಗರದ ಅಗೇದಿಬ್ಬ ಸರ್ಕಲ್ನಿಂದ ದುರ್ಗಾಂಭಿಕ ದೇಗುಲದವರೆಗೆ ಉರುಳು ಸೇವೆ ನಡೆಸಿ ಶ್ರೀನಿವಾಸ್ ದಾಸಕರಿಯಪ್ಪಗೆ ಬೆಂಬಲಿಸಿದರು.</p><p>ಕಾಂಗ್ರೆಸ್ ಮುಖಂಡ ಸಂತೋಷ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದ ಯುವಕರು, ಬಿಜೆಪಿ ಗೆಲುವಿಗೆ ದುರ್ಗಾಂಭಿಕ ದೇವಿಗೆ ಪೂಜೆ ಸಲ್ಲಿಕೆ ಮಾಡಿದರು.</p><p>ಇದನ್ನೂ ಓದಿ : ಟಿಕೆಟ್ ಸಿಗದ ಸಿಟ್ಟು: ದಾವಣಗೆರೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಅಲ್ಪಸಂಖ್ಯಾತ ಮುಖಂಡರು</a></p>
