Surprise Me!

ದಾಳಿ ಮಾಡಿದ ಚಿರತೆ ಮರಿ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು

2026-03-30 10 Dailymotion

<p>ಮೈಸೂರು: ಹಿಡಿಯಲು ಬಂದವರ ಮೇಲೆರಗಿದ ಚಿರತೆ ಮರಿಯನ್ನು ಹಗ್ಗದಿಂದ ಹಿಡಿದ ಗ್ರಾಮಸ್ಥರು, ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿದ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.</p><p>ತಾಲೂಕಿನ ಹೋಬಳಿಯ ಹುಲ್ಯಾಳು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ನಾಗಣ್ಣನ ಪುತ್ರ ಅಜಯ್ ಹಾಗೂ ಕೋಳಿ ಫಾರಂ ಮಾಲೀಕ ಕೆ.ಆರ್.ನಗರದ ನಿವಾಸಿ ರಾಜು ಚಿರತೆ ಮರಿ ದಾಳಿಯಿಂದ ಗಾಯಗೊಂಡವರು. ಅಜಯ್ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ರಾಜು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.</p><p>ಗ್ರಾಮದಲ್ಲಿ ಶನಿವಾರ ಸಂಜೆ ಗ್ರಾಮದೊಳಗೆ ಬಂದ ಚಿರತೆ ಮರಿ ಅಜಯ್‌ ಅವರಿಗೆ ಸೇರಿದ ಹುಲ್ಲಿನ ಮೆದೆಯೊಳಗೆ ಅಡಗಿ ಕುಳಿತಿತ್ತು. ಪಕ್ಕದಲ್ಲೇ ನಡೆದು ಹೋಗುತ್ತಿದ್ದ ಅಜಯ್ ಮೇಲೆರಗಿ ಕೈಗೆ ಕಚ್ಚಿದೆ. ಈ ವೇಳೆ ಅಜಯ್ ಜೋರಾಗಿ ಕಿರುಚಿದಾಗ, ನೆರವಿಗೆ ಧಾವಿಸಿದ ಕೋಳಿ ಫಾರಂ ಮಾಲಿಕ ರಾಜು ಅವರ ಮೇಲೂ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿ, ಹುಲ್ಲಿನ ಮೆದೆ ಸೇರಿಕೊಂಡಿದೆ.</p><p>ಬಳಿಕ ಗ್ರಾಮಸ್ಥರು ತಾವೇ ಹುಲ್ಲಿನ ಮೆದೆ ಸುತ್ತುವರೆದು, ಹಗ್ಗ ಹಾಗೂ ಬಲೆ ಸಹಾಯದಿಂದ ಚಿರತೆ ಮರಿಯನ್ನು ಸೆರೆ ಹಿಡಿದಿದ್ದಾರೆ. ಮಾಹಿತಿ ಮೇರೆಗೆ ಹುಣಸೂರಿನ ಡಿಆರ್‌ಎಫ್​ಓ ರಮಣಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ಒಂದು ವರ್ಷದ ಚಿರತೆ ಮರಿಯನ್ನು ವಶಕ್ಕೆ ಪಡೆದು ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿ, ಭಾನುವಾರ ಬೆಳಗ್ಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟಿದ್ದಾರೆ.</p><p>ಬೋನಿನಲ್ಲಿ ಮರಿ ಚಿರತೆ ಸೆರೆ: ಕೆಲವು ದಿನಗಳಿಂದ ಈ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ, ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆ ಬೋನ್ ಇಟ್ಟಿತ್ತು. ಆದರೆ, ತಾಯಿ ಬೀಳುವ ಸ್ಥಳದಲ್ಲಿ ಮರಿಯನ್ನು ಗ್ರಾಮಸ್ಥರು ಹಿಡಿದು ಹಾಕಿದ್ದಾರೆ. ಈಗ ತಾಯಿ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ.</p><p>ಇದನ್ನೂ ನೋಡಿ: ಭದ್ರಾ ಹುಲಿ ಅಭಯಾರಣ್ಯದಲ್ಲಿ ಕಪ್ಪು ಚಿರತೆ - ಚುಕ್ಕಿ ಚಿರತೆ ಗೋಚರ: ಸಫಾರಿ ಪ್ರಿಯರ ಸಂಖ್ಯೆ ದುಪ್ಪಟ್ಟು</a></p>

Buy Now on CodeCanyon