<p>ವಿಜೇಪುರದಲ್ಲಿ ಸರ್ಕಾರಿ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತಕ್ಕೆ ಹೊಸ ತಿರುವು ಸಿಕ್ಕಿದೆ. ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿದ್ದ ಯುವಕ ಅಭಿಷೇಕ್ ಉದ್ದೇಶಪೂರ್ವಕವಾಗಿ ಬರುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಅಭಿಷೇಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ದೇಹ ಸುಟ್ಟು ಕರಕಲಾಗಿದೆ. ಆತ್ಮಹತ್ಯೆಗೆ ಮುನ್ನ ಅಭಿಷೇಕ್ ಒಂದು ವಿಡಿಯೋ ಪೋಸ್ಟ್ ಮಾಡಿದ್ದು, ಮಾರ್ಚ್ 26ರಂದು ಮಧ್ಯಾಹ್ನ ಫೋಟೋ ಪೋಸ್ಟ್ ಮಾಡುವುದಾಗಿ ಹೇಳಿ, ತಾನು ಸಾಯಲು ಕಾರಣರಾದ ಮೂವರನ್ನು ಗುರುತಿಸಿ ಸಂಜೆಯೊಳಗೆ ದೂರವಾಗುವುದಾಗಿ ತಿಳಿಸಿದ್ದ. ಪ್ರೇಮ ವೈಫಲ್ಯ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.</p>
