<p>ಪಂಚರಾಜ್ಯ ಚುನಾವಣಿಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಟಿವಿಕೆ ಮುಖ್ಯಸ್ಥ ನಟ ವಿಜೆ ಅಬ್ಬರದ ಪ್ರಚಾರವನ್ನು ನಡೆಸುತ್ತಿದ್ದಾರೆ. ಪುದೂಚೆರಿಯಲ್ಲಿ ರೋಡ್ ಶೋ ನಡೆಸಿದ ವಿಜೆ, ಅಭಿಮಾನಿಗಳು ನೀಡಿದ ಉಡುಗೊರೆಗಳನ್ನು ಸ್ವೀಕರಿಸಿದರು. ಜಾಥಾದ ವೇಳೆ ಡಿಎಂಕೆ ಮತ್ತು ಕಾಂಗ್ರೆಸ್ ವಿರುದ್ಧ ವಿಜೆ ತೀವ್ರ ವಾಗ್ದಾಳಿ ನಡೆಸಿದರು. ಜಾಥಾ ವೇಳೆ ಅಭಿಮಾನಿಗಳು ವಿಜೆಗೆ ನೀರು, ಐಸ್ಕ್ರೀಮ್ ಮತ್ತು ಹೂಗಳನ್ನು ನೀಡಿ ತಮ್ಮ ಅಭಿಮಾನ ತೋರಿಸಿದರು.</p>
