<p>ಶಿವಮೊಗ್ಗದ ಅಲ್ಲಮಾ ಪ್ರಭು ಫ್ರೀಡಂ ಪಾರ್ಕ್ ಮೈದಾನದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭಾ ಆಯೋಜಿಸಿದ ಶಟ್ಟರ ಸಂತೆ ಮೇಳದ ಎರಡನೇ ದಿನ ವಿಶೇಷ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆಯಿತು. ತಿರುಪತಿ ತಿಮ್ಮಪ್ಪನ ಸನ್ನಿಧಿಯಿಂದ ಬಂದ ಪುರೋಹಿತ ಸಮೂಹ ಈ ಕಾರ್ಯಕ್ರಮ ನಡೆಸಿಕೊಟ್ಟಿತು. ಮಾಜಿ ಪರಿಷತ್ ಸಭಾಪತಿ D.H. ಶಂಕರ್ ಮೂರ್ತಿ ದಂಪತಿ ಮತ್ತು ಆರ್ಯ ವೈಶ್ಯ ಸಮಾಜದ ಬಂಧುಗಳು ತಿರುಪತಿಯಿಂದ ತಂದ ಲಡ್ಡು ಮತ್ತು ಪ್ರಸಾದ ವಿತರಣೆ ಮಾಡಲಾಯಿತು. ಶಿವಾರಿ ಫೌಂಡೇಶನ್ ವೆಂಕಟೇಶ ಮೂರ್ತಿ ನೇತೃತ್ವದಲ್ಲಿ ಸುಮಾರು 5000 ಜನರಿಗೆ ಲಡ್ಡು ಪ್ರಸಾದ ವಿತರಿಸಲಾಯಿತು. ಆರ್ಯ ವೈಶ್ಯ ಸ್ನೇಹಿತ್ರ ಬಳಗದ 100ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ ಈ ಸಂಭ್ರಮ ಇನ್ನೂ ಎರಡು ದಿನ ಮುಂದುವರೆಯಲಿದೆ.</p>
