Surprise Me!

ಬಳ್ಳಾರಿ: ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ; ಯುವಕ ಸಾವು

2026-04-13 40 Dailymotion

<p>ಬಳ್ಳಾರಿ : ಎಲೆಕ್ಟ್ರಿಕ್ ಏಥರ್ ಸ್ಕೂಟರ್‌ನಲ್ಲಿ ಹೊರಟಿದ್ದ ಯುವಕನಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದ್ದರಿಂದಾಗಿ ಆತ ಸಾವನ್ನಪ್ಪಿದ್ದಾನೆ ಎಂದು ಸಂಚಾರಿ ಠಾಣೆ ಪೊಲೀಸರು ತಿಳಿಸಿದ್ದಾರೆ.</p><p>ನಗರದ ಹೊಸ ಬಸ್‌ಸ್ಟ್ಯಾಂಡ್ ಸಮೀಪದ ರಂಗ ಮಂದಿರ ರಸ್ತೆಯ ಸರ್ಕಲ್‌ನಲ್ಲಿ ಇಂದು ಪೂರ್ವಾಹ್ನ ಈ ಅಪಘಾತ ನಡೆದಿದೆ. ಬೆಚ್ಚಿ ಬೀಳಿಸುವ ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. </p><p>ಕೂರಿಗನೂರಿನಿಂದ ಬಳ್ಳಾರಿಯ ಕಡೆಗೆ (ಬಸ್‌ಸ್ಟಾಂಡ್​) ಹೊರಟಿದ್ದ ಸರ್ಕಾರಿ ಬಸ್​ ಈ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದಾಗಿ ಯುವಕನು ಮೃತಪಟ್ಟಿದ್ದಾನೆ. ಮೃತ ಯುವಕನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬೊಮ್ಮನಹಾಳ್ ತಾಲೂಕಿನ ನಿವಾಸಿ ಎಂಬುದು ತಿಳಿದುಬಂದಿದೆ. </p><p>ಈ ಘಟನೆಯಲ್ಲಿ ಇನ್ನೋರ್ವ ವ್ಯಕ್ತಿಗೆ ಗಾಯಗಳಾಗಿವೆ ಎಂಬುದು ತಿಳಿದುಬಂದಿದೆ. ಬಳ್ಳಾರಿಯ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. </p><p>ಬೈಕ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ (ಶಿವಮೊಗ್ಗ) : ಬೈಕ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಖಾಸಗಿ ಬಸ್ ಪಲ್ಟಿಯಾಗಿರುವ ಘಟನೆ ಶಿಕಾರಿಪುರದ ಶಿವಮೊಗ್ಗ ರಸ್ತೆಯ ಕುಮದ್ವತಿ ಕಾಲೇಜಿನ ಮುಂಭಾಗ ಸೋಮವಾರ ನಡೆದಿದೆ. </p><p>ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುತ್ತಿದ್ದ ಬಸ್​ನ ಮುಂಭಾಗದಲ್ಲಿ ಬೈಕ್​ವೊಂದು ಹೋಗುತ್ತಿತ್ತು. ಇದ್ದಕ್ಕಿದ್ದಂತೆ ಚಾಲಕ ಬೈಕ್​ನ್ನು ರಸ್ತೆಯ ಬಲಕ್ಕೆ ತಿರುಗಿಸಿದ್ದಾನೆ. ಈ ವೇಳೆ, ಬೈಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕ ಬಸ್​ನ್ನು ಎಡಕ್ಕೆ ತಿರುಗಿಸಿದ್ದಾನೆ. ಹೀಗಾಗಿ, ಬಸ್ ಪಲ್ಟಿಯಾಗಿದೆ. ಇದರಿಂದ ಬಸ್​ನಲ್ಲಿದ್ದ 30ಕ್ಕೂ ಹೆಚ್ಚಿನ ಪ್ರಯಾಣಿಕರಿಗೆ ಗಾಯಗಳಾಗಿವೆ.</p><p>ಇದನ್ನೂ ಓದಿ : ಶಿವಮೊಗ್ಗ: ಬೈಕ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ, ಹಲವರಿಗೆ ಗಾಯ</a></p>

Buy Now on CodeCanyon