Surprise Me!

ರಾಮನಗರ: ಮನೆಗೆ ನುಗ್ಗಿ ಕಾಡಾನೆಗಳ ಉಪಟಳ

2026-04-17 19 Dailymotion

<p>ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಾಡಾನೆ ದಾಳಿ ನಿಲ್ಲುತ್ತಿಲ್ಲ. ರೈತರ ಬೆಳೆ ಹಾನಿ ಮಾಡುತ್ತಿದ್ದ ಕಾಡಾನೆಗಳು ಇದೀಗ ಜನವಸತಿ ಸ್ಥಳಗಳಿಗೆ ನುಗ್ಗುತ್ತಿವೆ.</p><p>ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ಎರಡು ಕಾಡಾನೆಗಳು ಮನೆಗೆ ನುಗ್ಗಿವೆ. ಗ್ರಾಮದ ದೊಡ್ಡೇಗೌಡ ಎಂಬವರ ಮನೆಗೆ ಬಂದಿರುವ ಎರಡು ಕಾಡಾನೆಗಳು ಮನೆ ಮುಂಭಾಗ ಬೆಳೆದಿದ್ದ ತೆಂಗಿನ ಮರದಲ್ಲಿದ್ದ ಎಳನೀರು ಎಳೆದು ಹಾಕಿ ಹಾನಿ ಮಾಡಿವೆ.</p><p>ಘಟನೆಯಿಂದ ಸುತ್ತಮುತ್ತಲ ಮನೆಯವರು ಆತಂಕದಲ್ಲಿದ್ದಾರೆ. ಪದೇ ಪದೇ ಕಾಡಾನೆಗಳು ದಾಳಿ ಮಾಡುತ್ತಿದ್ದರೂ ಕೂಡ ಅವುಗಳನ್ನು ಶಾಶ್ವತವಾಗಿ ಕಾಡಿಗಟ್ಟುವ ಕೆಲಸ ಮಾತ್ರ ಆಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</p><p>ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ, ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.</p><p>ಇದೇ ರೀತಿ, ಇತ್ತೀಚಿಗೆ ಆನೇಕಲ್​​​ ಸುತ್ತಮುತ್ತ ಕಾಡಾನೆಗಳು ಪ್ರತ್ಯಕ್ಷವಾಗಿದ್ದವು. ದೊಡ್ಡಕೆರೆಯ ಎಸ್ಟೀಪಿ ಪ್ಲಾಂಟ್ ಬಳಿ ಮೂರು ಆನೆಗಳು ಪೊದೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಸೆರೆಯಾಗಿತ್ತು.</p><p>ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಹೋಂ ಸ್ಟೇಗಳಿಗೂ ಆನೆಗಳು ನುಗ್ಗಿದ್ದವು. </p><p>ಇದನ್ನೂ ಓದಿ: ಕೊಟ್ಟಿಗೆಹಾರ ಹೋಂ ಸ್ಟೇ ಮುಂದೆ ಕಾಡಾನೆ ಸಂಚಾರ: ಸಿಸಿಟಿವಿಯಲ್ಲಿ ದೃಶ್ಯ ಸೆರೆ</a></p>

Buy Now on CodeCanyon