<p>ಬಳ್ಳಾರಿ: ಸರ್ಕಾರಿ ಬಸ್ನಲ್ಲಿ ಪ್ರಯಾಣಿಕರ ದಾಹ ತಣಿಸಲು ಬಳ್ಳಾರಿಯ ಸನ್ಮಾರ್ಗ ಗೆಳೆಯರ ಬಳಗ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಕಳೆದ 11 ವರ್ಷಗಳಿಂದ ಸರ್ಕಾರಿ ಬಸ್ಗಳಲ್ಲಿ ಶುದ್ಧ ಕುಡಿಯುವ ನೀರಿಟ್ಟು ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿದ್ದಾರೆ. </p><p>ಆರಂಭದಲ್ಲಿ 20 ಸರ್ಕಾರಿ ಬಸ್ಗಳಲ್ಲಿ ಮಾತ್ರ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈಗ 90ಕ್ಕೂ ಅಧಿಕ ಬಸ್ಗಳಲ್ಲಿ ನೀರು ಇಡಲಾಗುತ್ತದೆ. ನೀರು ಖಾಲಿಯಾದ ತಕ್ಷಣ ಮತ್ತೆ ನೀರು ಹಾಕುತ್ತಾರೆ. ಬಸ್ನಲ್ಲಿ ನೀರಿನ ವ್ಯವಸ್ಥೆ ಮಾಡಿದ್ದರಿಂದ ಪ್ರಯಾಣಿಕರಿಗೆ, ಅದರಲ್ಲೂ ಗ್ರಾಮಗಳಿಂದ ಕಾಲೇಜಿಗಾಗಿ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. </p><p>ಬಸ್ನಲ್ಲಿ ನೀರಿನ ವ್ಯವಸ್ಥೆ ಮಾಡಿದ್ದಕ್ಕೆ ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಿತ್ಯ ಬೇಡಿಕೆ ಬಂದಂತೆ ಸರ್ಕಾರಿ ಬಸ್ಗಳಿಗೆ ಶುದ್ಧವಾದ ನೀರು ಇಡಲಾಗುತ್ತದೆ. ಇದಕ್ಕೆ ಸಾರಿಗೆ ನಿವಾರ್ಹಕರು, ಚಾಲಕರು, ಕೆಎಸ್ಆರ್ಟಿಸಿ ಅಧಿಕಾರಿಗಳು ಕೂಡ ಸಹಕಾರ ನೀಡುತ್ತಾರೆ ಅಂತಿದ್ಧಾರೆ ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರು.</p><p>ಬಳ್ಳಾರಿ ಜಿಲ್ಲೆಯ ಮಟ್ಟಿಗೆ ಈ ವರ್ಷ ದಾಖಲೆಯ ಉಷ್ಣಾಂಶ ಕಂಡುಬರುತ್ತಿದೆ. ಹೀಗಾಗಿ ಜಲಕ್ಷಾಮದಿಂದಾಗಿ ಜನರು ಹನಿ-ಹನಿ ನೀರಿಗೆ ಪರದಾಡುವ ಪರಿಸ್ಥಿತಿಯಲ್ಲಿ ಸನ್ಮಾರ್ಗ ಗೆಳೆಯರ ಬಳಗ ಸರ್ಕಾರಿ ಬಸ್ನಲ್ಲಿ ನೀರಿನ ವ್ಯವಸ್ಥೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.</p><p>ಇದನ್ನೂ ಓದಿ: ಬಿಡುವಿನ ವೇಳೆ ಗಿಡ ನೆಡುವ ಕಾಯಕ: ದಶಕದಲ್ಲಿ 6 ಸಾವಿರ ಗಿಡನೆಟ್ಟ ಟೀಂ ಮೈಸೂರು</a></p>
