Surprise Me!

ಸರ್ಕಾರಿ ಬಸ್​ನಲ್ಲಿ ಸನ್ಮಾರ್ಗ ಗೆಳೆಯರ ಬಳಗದಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ

2026-04-22 4 Dailymotion

<p>ಬಳ್ಳಾರಿ: ಸರ್ಕಾರಿ ಬಸ್​ನಲ್ಲಿ ಪ್ರಯಾಣಿಕರ ದಾಹ ತಣಿಸಲು ಬಳ್ಳಾರಿಯ ಸನ್ಮಾರ್ಗ ಗೆಳೆಯರ ಬಳಗ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಕಳೆದ 11 ವರ್ಷಗಳಿಂದ ಸರ್ಕಾರಿ ಬಸ್​ಗಳಲ್ಲಿ ಶುದ್ಧ ಕುಡಿಯುವ ನೀರಿಟ್ಟು ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿದ್ದಾರೆ.   </p><p>ಆರಂಭದಲ್ಲಿ 20 ಸರ್ಕಾರಿ ಬಸ್​ಗಳಲ್ಲಿ ಮಾತ್ರ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈಗ 90ಕ್ಕೂ ಅಧಿಕ ಬಸ್​ಗಳಲ್ಲಿ ನೀರು ಇಡಲಾಗುತ್ತದೆ. ನೀರು ಖಾಲಿಯಾದ ತಕ್ಷಣ ಮತ್ತೆ ನೀರು ಹಾಕುತ್ತಾರೆ. ಬಸ್​ನಲ್ಲಿ ನೀರಿನ ವ್ಯವಸ್ಥೆ ಮಾಡಿದ್ದರಿಂದ ಪ್ರಯಾಣಿಕರಿಗೆ, ಅದರಲ್ಲೂ ಗ್ರಾಮಗಳಿಂದ ಕಾಲೇಜಿಗಾಗಿ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. </p><p>ಬಸ್​ನಲ್ಲಿ ನೀರಿನ ವ್ಯವಸ್ಥೆ ಮಾಡಿದ್ದಕ್ಕೆ ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಿತ್ಯ ಬೇಡಿಕೆ ಬಂದಂತೆ ಸರ್ಕಾರಿ ಬಸ್​ಗಳಿಗೆ ಶುದ್ಧವಾದ ನೀರು ಇಡಲಾಗುತ್ತದೆ. ಇದಕ್ಕೆ ಸಾರಿಗೆ ನಿವಾರ್ಹಕರು, ಚಾಲಕರು, ಕೆಎಸ್​ಆರ್​ಟಿಸಿ ಅಧಿಕಾರಿಗಳು ಕೂಡ ಸಹಕಾರ ನೀಡುತ್ತಾರೆ ಅಂತಿದ್ಧಾರೆ ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರು.</p><p>ಬಳ್ಳಾರಿ ಜಿಲ್ಲೆಯ ಮಟ್ಟಿಗೆ ಈ ವರ್ಷ ದಾಖಲೆಯ ಉಷ್ಣಾಂಶ ಕಂಡುಬರುತ್ತಿದೆ. ಹೀಗಾಗಿ ಜಲಕ್ಷಾಮದಿಂದಾಗಿ ಜನರು ಹನಿ-ಹನಿ ನೀರಿಗೆ ಪರದಾಡುವ ಪರಿಸ್ಥಿತಿಯಲ್ಲಿ ಸನ್ಮಾರ್ಗ ಗೆಳೆಯರ ಬಳಗ ಸರ್ಕಾರಿ ಬಸ್​ನಲ್ಲಿ ನೀರಿನ ವ್ಯವಸ್ಥೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.</p><p>ಇದನ್ನೂ ಓದಿ: ಬಿಡುವಿನ ವೇಳೆ ಗಿಡ ನೆಡುವ ಕಾಯಕ: ದಶಕದಲ್ಲಿ 6 ಸಾವಿರ ಗಿಡನೆಟ್ಟ ಟೀಂ ಮೈಸೂರು</a></p>

Buy Now on CodeCanyon