<p>ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ದಾಂಧಲೆ ಹಾಗೂ ಪುಂಡಾಟ ಮುಂದುವರೆಯುತ್ತಲೇ ಇದೆ. ಇದರಿಂದಾಗಿ ಈ ಭಾಗದಲ್ಲಿ ಸಾರ್ವಜನಿಕರು, ವಾಹನ ಸವಾರರು ಪ್ರತಿನಿತ್ಯ ತಲೆಬಿಸಿ ಮಾಡಿಕೊಂಡು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.</p><p>ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ 3ನೇ ತಿರುವಿನಲ್ಲಿ ಕಾಡಾನೆಯೊಂದು ಬೀಡುಬಿಟ್ಟಿದ್ದು, ಇದರಿಂದಾಗಿ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಹೋಗುವಂತಹ ಸವಾರರುಗಳಿಗೆ ತಲೆನೋವಾಗಿ ಪರಿಣಮಿಸಿದೆ. </p><p>ಈ ಒಂಟಿ ಸಲಗವನ್ನು ಕಂಡು ಬೆದರಿದ ವಾಹನ ಸವಾರರು ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿದ್ದಾರೆ. ಅಲ್ಲದೇ, ಈ ವೇಳೆ ನೆಟ್ವರ್ಕ್ ಇಲ್ಲದಿರುವುದರಿಂದಾಗಿ ಅರಣ್ಯ ಇಲಾಖೆಗೆ ಅಥವಾ ಇತರರಿಗೆ ಮಾಹಿತಿ ನೀಡಲು ಸಹ ಅವರಿಗೆ ಸಾಧ್ಯವಾಗಿಲ್ಲ.</p><p>ಈ ಕುರಿತು ಸ್ಥಳೀಯರಾದ ಸಂಜಯ್ ಕೊಟ್ಟಿಗೆಹಾರ ಅವರು ಈಟಿವಿ ಭಾರತ</a>ಕ್ಕೆ ಪ್ರತಿಕ್ರಿಯೆ ನೀಡಿದ್ದು, 'ಹಲವು ವರ್ಷಗಳಿಂದ ಈ ಕಾಡಾನೆ ಇಲ್ಲೇ ಸಂಚಾರ ಮಾಡುತ್ತಿದೆ. ನಾವು ಅನೇಕ ಬಾರಿ ಅರಣ್ಯ ಇಲಾಖೆಗೆ ಈ ಕಾಡಾನೆಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದೇವೆ. ಆದರೂ, ಯಾವುದೇ ರೀತಿಯ ಪ್ರಯೋಜನವಾಗಿಲ್ಲ' ಎಂದು ಆರೋಪಿಸಿದ್ದಾರೆ.</p><p>ಇದನ್ನೂ ಓದಿ : ಚನ್ನಪಟ್ಟಣಕ್ಕೆ ನುಗ್ಗಿದ ಒಂಟಿ ಸಲಗ : ವಿಡಿಯೋ - WILD ELEPHANT SPOTTED</a></p>
