<p>ಕೇರಳದ ಕಿಳಂಗೂರು ಮಹಾವಿಷ್ಣು ದೇಗುಲದ ಆವರಣದಲ್ಲಿ ಮದವೇರಿದ ಆನೆ ಅಟ್ಟಹಾಸ ನಡೆಸಿ ಚಾಲಕ ಮತ್ತು ಮಾವುತನ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ. ಕೊಳ್ಳಮ್ನಿಂದ ಉತ್ಸವಕ್ಕಾಗಿ ಕರೆತರಲಾಗಿದ್ದ 'ಪಾರ್ಥ ಸಾರಥಿ' ಎಂಬ ಆನೆ ದೇಗುಲಕ್ಕೆ ತಲುಪಿದ ಬಳಿಕ ಮದವೇರಿ ರೋಷಾವೇಶಕ್ಕೆ ಒಳಗಾಯಿತು. ಆನೆ ತನ್ನ ಸೊಂಡಿಲಿನಿಂದ ಕಾರನ್ನು ಎತ್ತಿ ಬಿಸಾಡಿ, ಚಾಲಕ ವಿಷ್ಣು ಮತ್ತು ಮಾವುತ ಪ್ರದೀಪ್ ಮೇಲೆ ದಾಳಿ ನಡೆಸಿತು. ಚಾಲಕ ಸ್ಥಳದಲ್ಲೇ ಮೃತಪಟ್ಟರೆ, ಮಾವುತನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಆಘಾತಕಾರಿ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.</p>
