<p>ಮೈಸೂರು: ರೈತರ ಜೀವನ ಆಧಾರಸ್ತಂಭವಾದ ಫಲವತ್ತಾದ ಭೂಮಿ ಕಿತ್ತುಕೊಂಡು ಆ ಜಾಗದಲ್ಲಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಗುಡುಮಾದನಹಳ್ಳಿ ರೈತ ಕುಟುಂಬದವರು ತಮ್ಮ ಗ್ರಾಮದಿಂದ ಜಾನುವಾರುಗಳೊಂದಿಗೆ ಪಾದಯಾತ್ರೆ ನಡೆಸಿ, ಜಿಲ್ಲಾ ಪಂಚಾಯಿತಿ ಕಚೇರಿಗೆ ಆಗಮಿಸಿ, ಅಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸ್ಥಳೀಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.</p><p>ವರುಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗುಡುಮಾಡನಹಳ್ಳಿ ಗ್ರಾಮದ ಫಲವತಾದ ಕೃಷಿ ಭೂಮಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಇದಕ್ಕಾಗಿ ಈ ಪ್ರದೇಶದ 36 ಎಕರೆ ಹಸಿರು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈ ಗ್ರಾಮದಲ್ಲಿರುವ 80 ಕುಟುಂಬಗಳು ಕಳೆದ 30 ವರ್ಷಗಳಿಂದ ಕೃಷಿ ಹೈನುಗಾರಿಕೆ ಹಾಗೂ ತರಕಾರಿ ಬೆಳೆದು ಜೀವನ ನಡೆಸುತ್ತಿವೆ. ಅದರಿಂದ ಈ ಸ್ಥಳದಲ್ಲಿ ಆಸ್ಪತ್ರೆ ನಿರ್ಮಾಣ ಬೇಡ ಎಂದು ಕಳೆದ 125 ದಿನದಿಂದ ಪ್ರತಿಭಟನೆ ನಡೆಸುತ್ತಿದೆ.</p><p>ಈಗ ಇದನ್ನು ವಿರೋಧಿಸಿ ಗ್ರಾಮಸ್ಥರು ತಮ್ಮ ಗ್ರಾಮದಿಂದ ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಇರುವ ಸಿಎಂ ಸಿದ್ದರಾಮಯ್ಯ ಅವರ ಸ್ಥಳೀಯ ಕಚೇರಿವರೆಗೆ ಪಾದಯಾತ್ರೆ ನಡೆಸಿದರು.</p><p>ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ತಮ್ಮ ಜೀವನದ ಆಧಾರವಾಗಿರುವ ಸ್ಥಳದಲ್ಲಿ ನಿಮ್ಹಾನ್ಸ್ ಆಸ್ಪತ್ರೆ ಬೇಡ, ಬೇರೆ ಕಡೆ ನಿರ್ಮಾಣ ಮಾಡಿ ಎಂದು ಆಗ್ರಹಿಸಿದರು. ರೈತರ ಪಾದಯಾತ್ರೆಗೆ ರೈತಸಂಘ, ಪರಿಸರಕ್ಕಾಗಿ ನಾವು ಸಂಘಟಣೆ ಹಾಗೂ ವಿವಿಧ ಸಂಸ್ಥ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದರು.</p><p>ಇದನ್ನೂ ನೋಡಿ: ರಾಜ್ಕೋಟ್: ಸಂಚಾರಕ್ಕೆ ಅಡ್ಡಿಯಾದ ದೇವಸ್ಥಾನಗಳ ತೆರವು, ಭಜನೆ ಮಾಡಿ ಸ್ಥಳೀಯರ ಪ್ರತಿಭಟನೆ</a></p>
