<p>ಹಾವೇರಿ: ರೈತರು ಡಿಸೇಲ್ಗಾಗಿ ಮುಗಿಬಿದ್ದ ಘಟನೆ ಹಾವೇರಿ ಹೊರವಲಯದ ಖಾಸಗಿ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ. </p><p>ಡೀಸೆಲ್ಗಾಗಿ ಸರತಿಯಲ್ಲಿ ಕ್ಯಾನ್ ಇಟ್ಟು ರೈತರು ಗಂಟೆ ಗಟ್ಟಲೇ ಕಾಯ್ದಿದ್ದಾರೆ. ಜಮೀನು ಉಳುಮೆ ಮಾಡಲು ಡೀಸೆಲ್ ಸಿಗದೇ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ತಾಲೂಕು ಕೇಂದ್ರದಲ್ಲಿ ಸರಿಯಾಗಿ ಡೀಸೆಲ್ ಸಿಗುತ್ತಿಲ್ಲ. ಇತ್ತ ಜಿಲ್ಲಾ ಕೇಂದ್ರಕ್ಕೆ ಬಂದರೆ ಇಲ್ಲಿಯೂ ಡೀಸೆಲ್ ಇಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.</p><p>ರೈತರ ಕ್ಯಾನ್ಗಳಿಗೆ ಬಂಕ್ ಮಾಲೀಕರು ಡೀಸೆಲ್ ಹಾಕುತ್ತಿಲ್ಲ. ರೈತರು ಜೀವನ ಮಾಡೋದು ಹೇಗೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. </p><p>ಸಮರ್ಪಕ ಬಿತ್ತನೆ ಬೀಜ ಇಲ್ಲ, ಸಮರ್ಪಕ ಗೊಬ್ಬರ ಇಲ್ಲ. ಇದೀಗ ಡೀಸೆಲ್ ಇಲ್ಲವಾಗಿದ್ದು, ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.</p><p>ಇಂದು ಮತ್ತೆ ತೈಲ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್ಗೆ 95 ಪೈಸೆ ಹೆಚ್ಚಿಸಲಾಗಿದೆ. 10 ದಿನಗಳಲ್ಲಿ ಇದು ಮೂರನೇ ಬಾರಿಗೆ ದರ ಏರಿಕೆಯಾಗಿದೆ.</p><p>ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ ಮತ್ತೊಂದು ಶಾಕ್: ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆ: 10 ದಿನದಲ್ಲಿ ಮೂರನೇ ಬಾರಿ ಹೆಚ್ಚಳ: ಬೆಂಗಳೂರಲ್ಲಿ ಎಷ್ಟಿದೆ ಬೆಲೆ?</a></p>
