<p>ಬಾಗಲಕೋಟೆ: ಮನುಷ್ಯರಿಗೆ ಹೇಗೆ ತಾಯಿಯ ವಾತ್ಸಲ್ಯ, ಪ್ರೀತಿ, ಬೆಸುಗೆ, ಬಾಂಧವ್ಯ ಇರುತ್ತದೆಯೋ ಹಾಗೆಯೇ ಪ್ರಾಣಿಗಳಿಗೂ ಇರುತ್ತದೆ ಎಂಬುದಕ್ಕೆ ಈ ಮನ ಕಲಕುವ ದೃಶ್ಯವೇ ಸಾಕ್ಷಿಯಾಗಿದೆ.</p><p>ಶ್ವಾನವೊಂದು ಅನಾರೋಗ್ಯದಿಂದ ಮೃತಪಟ್ಟಿತ್ತು. ಈ ಶ್ವಾನವನ್ನು ಅಂತಿಮ ಸಂಸ್ಕಾರ ಮಾಡಲು ಪ್ರಾಣಿ ಪ್ರೇಮಿ, ಸಾಮಾಜಿಕ ಚಿಂತಕ ಹಾಗೂ ಚಲನಚಿತ್ರ ನಿರ್ದೇಶಕರಾದ ಘನಶ್ಯಾಮ ಭಾಂಡೆಗೆ ತೆಗೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಮೃತ ಶ್ವಾನದ ತಾಯಿ ಶ್ವಾನ ಆ ವಾಹನದ ಹಿಂದೆಯೇ ಹೋಗಿದೆ. ಸ್ಕೂಟಿಯಲ್ಲಿ ಮೃತದೇಹವನ್ನು ಸಾಗಿಸಲಾಯಿತು. ಅದರಲ್ಲೇ ಸತ್ತ ತನ್ನ ಮರಿಯನ್ನು ನೆಕ್ಕಿ ನೆಕ್ಕುವ ಮೂಲಕ ತನ್ನ ಮೂಕ ರೋಧನೆಯನ್ನು ವ್ಯಕ್ತಪಡಿಸಿತು.</p><p>ನಂತರ ನವನಗರ ಚಂದನ ಟಾಕೀಸ್ ಬಳಿ ಜೆಸಿಬಿಯಿಂದ ಗುಂಡಿ ತೆಗೆದು ಮೃತ ಶ್ವಾನದ ಅಂತಿಮ ಸಂಸ್ಕಾರ ನಡೆಸಲಾಯಿತು. ಈ ವೇಳೆ ತಾಯಿ ಶ್ವಾನಕ್ಕೆ ಮನುಷ್ಯರಂತೆ ತನ್ನ ದುಃಖವನ್ನು ತೋರ್ಪಪಡಿಸಲು ಸಾಧ್ಯವಾಗದೇ ಮೂಕ ರೋಧನೆ ಮೂಲಕ ತನ್ನ ಭಾವನೆಯನ್ನು ವ್ಯಕ್ತಪಡಿಸಿತು. ಮೃತದೇಹವನ್ನು ಮುಚ್ಚಿದ ನಂತರವೂ ಶ್ವಾನ ಆ ಮಣ್ಣಿನ ಮೇಲೆ ಕುಳಿತುಕೊಂಡಿತು. ಈ ದೃಶ್ಯ ನೋಡಿದರೆ ಎಂಥವರ ಕರುಳು ಕೂಡ ಚುರ್ ಎನ್ನುತ್ತದೆ. ಈ ಘಟನೆ ಪ್ರಾಣಿಗಳೂ ಸಹ ಯಾವ ರೀತಿ ಭಾವನಾತ್ಮಕವಾಗಿ ತನ್ನವರನ್ನು ಕಳೆದುಕೊಂಡರೆ ನೋವನ್ನು ತೋಡಿಕೊಳ್ಳುತ್ತವೆ ಎಂಬುದಕ್ಕೆ ನಿದರ್ಶನವಾಗಿದೆ. </p><p>ಇದನ್ನೂ ಓದಿ: ಬೇಟೆಯಾಡಲು ಮನೆ ಆವರಣಕ್ಕೆ ನುಗ್ಗಿದ ಚಿರತೆ, ನಾಯಿ ಕೂಗಾಟಕ್ಕೆ ಹೆದರಿ ಪರಾರಿ: ಸಿಸಿಟಿವಿ ದೃಶ್ಯ</a></p>
