<p>ಏಳು ವರ್ಷದ ಬಾಲಕ ಆದಿತ್ಯ ನಾಯಕ್ ನಾಪತ್ತೆಯಾಗಿ ಶವವಾಗಿ ಪತ್ತೆಯಾದ ಪ್ರಕರಣದಲ್ಲಿ ಹೊಸ ತಿರುವು ಬಂದಿದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಾವ ತಾವರ ನಾಯಕ್ (41 ವರ್ಷ) ಬಾಲಕನನ್ನು ಜೇನು ಹಿಡಿಯುವ ನೆಪದಲ್ಲಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ತೊರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ. ಮದುವೆಯಾಗದ ಮಾವ ಬಾಲಕನನ್ನೇ ಮಗನಂತೆ ಕಾಣುತ್ತಿದ್ದ. ಜಗಳೂರು ಪೊಲೀಸರು ಆರೋಪಿಯ ಸ್ವಯಂ ಹೇಳಿಕೆ ಆಧಾರದ ಮೇಲೆ ಪ್ರಕರಣ ಭೇದಿಸಿದ್ದು, FSL ತಂಡ ಮತ್ತು ಇತರ ತಜ್ಞರು ಸ್ಥಳ ತನಿಖೆ ನಡೆಸಿದ್ದಾರೆ.</p>
