Surprise Me!

ಧಾರವಾಡ: ವೈದ್ಯ ಡಾ. ಕಿರಣ್ ಹತ್ಯೆ - ಪತ್ನಿ ಪ್ರಿಯಾಂಕಾ ಬಂಧನ

2026-07-16 0 Dailymotion

<p>ಧಾರವಾಡದಲ್ಲಿ ಚಿರಾಯು ಆಸ್ಪತ್ರೆಯ ವೈದ್ಯ ಡಾ. ಕಿರಣ್ ಅವರನ್ನು ಅವರ ಪತ್ನಿ ಪ್ರಿಯಾಂಕಾ ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಅನಸ್ತೇಶಿಯಾ ಇಂಜೆಕ್ಷನ್ ನೀಡಿ ಮಭ್ಬು ಮಾಡಿ, ಬಳಿಕ ಚಾಕುವಿನಿಂದ ಕೊಲೆ ಮಾಡಿದ ಆರೋಪ ಪ್ರಿಯಾಂಕಾ ಮೇಲಿದೆ. 8 ವರ್ಷದ ಮಗನ ಮೇಲೂ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಲಾಗಿದೆ. ರಕ್ತದ ಮಡುವಿನಲ್ಲಿ ಮಗ ಬಿದ್ದಿದ್ದರೂ ತಾಯಿ ಮೊಬೈಲ್ ನೋಡುತ್ತಾ ಮಲಗಿದ್ದ ಕ್ರೂರ ದೃಶ್ಯ ಬೆಳಕಿಗೆ ಬಂದಿದೆ. ಕಿರಣ್ ಸೋದರ ಮಾವ ಫೋನ್ ಮಾಡಿ ಸ್ಪಂದನೆ ಇಲ್ಲದ ಕಾರಣ ಮನೆಗೆ ಬಂದು ನೋಡಿದಾಗ ಘಟನೆ ಬಯಲಾಯಿತು. ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಮಗುವನ್ನು ರಕ್ಷಿಸಲಾಗಿದ್ದು, ಪ್ರಿಯಾಂಕಾಳನ್ನು ಉಪ್ಪನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.</p>

Buy Now on CodeCanyon