<p>ನೀಟ್ ಪ್ರಶ್ನಪತ್ರಿಕೆ ಸೋರಿಕೆ ವಿಚಾರದ ಬಗ್ಗೆ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಕ್ರಿಯೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಎಲ್ಲರ ಕರ್ತವ್ಯ ಎಂದು ಹೇಳಿದ ಅವರು, ಪೇಪರ್ ಲೀಕ್ ವಿಚಾರ ಮುಂದಿಟ್ಟು ವಿದ್ಯಾರ್ಥಿಗಳನ್ನು ಪ್ರಚೋದಿಸಬಾರದು ಎಂದು ಎಚ್ಚರಿಸಿದ್ದಾರೆ. ನೀಟ್ ಅಕ್ರಮದ ವಿರುದ್ಧ ವಿಪಕ್ಷಗಳ ಆಕ್ರೋಶದ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಗದ್ದಲದಿಂದ ಮೂರೇ ನಿಮಿಷಕ್ಕೆ ಮುಂದೂಡಲ್ಪಟ್ಟಿವೆ. ಪ್ರಶ್ನೋತ್ತರ ಕಲಾಪ ನಡೆಸಲು ಸರ್ಕಾರ ಮುಂದಾದರೂ ವಿಪಕ್ಷಗಳ ವಿರೋಧದಿಂದ ಸಂಸತ್ ಕಲಾಪ ಅಸ್ತವ್ಯಸ್ತವಾಗಿದೆ.</p>
