Surprise Me!

Watch Video.. ದಕ್ಷಿಣ ಕನ್ನಡ: ಬಾವಿಗೆ ಬಿದ್ದ ಕಾಡಾನೆ ರಕ್ಷಣೆ ಬಳಿಕ ಜನವಸತಿ ಪ್ರದೇಶದತ್ತ ದೌಡು

2026-04-13 85 Dailymotion

<p>ಸುಳ್ಯ (ದ.ಕನ್ನಡ): ಸುಳ್ಯದ ಪೆರಾಜೆ ಸಮೀಪದ ಕಲ್ಚೆರ್ಪೆಯಲ್ಲಿ ಬಾವಿಗೆ ಬಿದ್ದ ಕಾಡಾನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ.</p><p>ಮೇಲೆದ್ದ ಕಾಡಾನೆ ಜನವಸತಿ ಪ್ರದೇಶದತ್ತ ದೌಡಾಯಿಸಿದೆ. ನಿನ್ನೆ ರಾತ್ರಿ ಪೆರಾಜೆ ಸಮೀಪದ ಕಲ್ಚೆರ್ಪೆಯಲ್ಲಿ ಪ್ರಜ್ವಲ್ ಎಂಬವರ ಬಾವಿಗೆ ಕಾಡಾನೆ ಬಿದ್ದಿತ್ತು. ವಿಷಯ ತಿಳಿದು ಅರಣ್ಯ ಇಲಾಖೆಯವರು ರಾತ್ರಿಯೇ ದೌಡಾಯಿಸಿದರು. ಬೆಳಗ್ಗೆ 8 ಗಂಟೆಗೆ ಹಿಟಾಚಿ ತಂದು ಕಣಿವೆ ತೋಡಲಾಯಿತು. ಮಧ್ಯಾಹ್ನ 12.50ರ ವೇಳೆಗೆ ಆನೆ ಬಾವಿಯಿಂದ ಮೇಲೆದ್ದು ಜನ ವಸತಿ ಪ್ರದೇಶದತ್ತ ದೌಡಾಯಿಸಿತು. </p><p>ಆನೆಯ ಮುಂದಿನ ಚಲನೆಯ ಬಗ್ಗೆ ಅರಣ್ಯ ಇಲಾಖೆ ನಿಗಾ ವಹಿಸಲಿದೆ. ಆನೆ ಬಾವಿಗೆ ಬಿದ್ದ ಸುದ್ದಿ ತಿಳಿದು ಜನರು ಗುಂಪು ಗುಂಪಾಗಿ ಬರತೊಡಗಿದರು. ಅರಣ್ಯ, ಪೋಲಿಸ್ ಇಲಾಖೆ ಬೇಕಾದ ಸುರಕ್ಷತಾ ಕ್ರಮ ಕೈಗೊಂಡಿತ್ತು. ಹಿಟಾಚಿಯನ್ನು ಲಕ್ಷ್ಮೀ ಪ್ರಸಾದ್​ ತೊಡಿಕಾನ, ತೇಜಸ್ ಚೆಮ್ನೂರು ಅವರು ಆಪರೇಟ್ ಮಾಡಿ ಕಣಿವೆ ತೋಡಿ ಆನೆಯನ್ನು ಮೇಲೆ ಬರಲು ಸಹಕರಿಸಿದರು.</p><p>ಅರಣ್ಯ ಇಲಾಖೆಯ ಸಿಸಿಎಫ್ ಕರಿಕಾಳನ್, ಡಿಎಫ್ ಒ ಆಂಥೋನಿ ಎಸ್. ಮರಿಯಪ್ಪ, ಎಸಿಎಫ್​ಗಳಾದ ಪ್ರಶಾಂತ್ ಪೈ, ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ್, ರೇಂಜರ್​ಗಳಾದ ಕಿರಣ್ ಪುತ್ತೂರು, ವಿಮಲ್ ಬಾಬು ಹಾಗೂ ಸಿಬ್ಬಂದಿಗಳು ಪೋಲೀಸ್ ಇಲಾಖೆಯವರು, ಅಗ್ನಿ ಶಾಮಕ ಇಲಾಖೆಯವರು‌ ಸಹಕರಿಸಿದ್ದರು.</p><p>ಇದನ್ನೂ ಓದಿ: ದಕ್ಷಿಣ ಕನ್ನಡ: ಕಡಬ ತಾಲೂಕಿನಲ್ಲಿ ಕಾಡಾನೆಗಳ ಹಿಂಡು ಪತ್ತೆ, ಸಾರ್ವಜನಿಕರಿಗೆ ಎಚ್ಚರಿಕೆ</a></p>

Buy Now on CodeCanyon