<p>ಮೈಸೂರು: ಬಿಸಿಲು ತಾಪ ತಾಳಲಾರದೇ ಹೆಲ್ಮೆಟ್ನಲ್ಲಿ ಮಲಗಿದ್ದ ನಾಗರಹಾವನ್ನು ಉರಗ ರಕ್ಷಕ ಸ್ನೇಕ್ ಶ್ಯಾಮ್ ರಕ್ಷಿಸಿದ್ದಾರೆ.</p><p>ಬೇಸಿಗೆಯ ಬಿಸಿಲಿನಿಂದ ಜನರು ಹಾಗೂ ಪ್ರಾಣಿಗಳು ಬಳಲುತ್ತಿದ್ದು, ಅದರಂತೆ ನಾಗರಹಾವು ಮೈಸೂರಿನ ಮೇಟಗಳ್ಳಿಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದಕ್ಕೆ ಪ್ರವೇಶಿ, ಕಾರ್ಮಿಕರ ಹೆಲ್ಮೆಟ್ನಲ್ಲಿ ಸೇರಿಕೊಂಡಿತ್ತು. ತಕ್ಷಣ ಅಲ್ಲಿನ ಸಿಬ್ಬಂದಿ ಉರಗ ತಜ್ಞ ಸ್ನೇಕ್ ಶ್ಯಾಮ್ಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸ್ನೇಕ್ ಶ್ಯಾಮ್ ಅವರು ನಾಗರಹಾವನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.</p><p>ಸ್ನೇಕ್ ಶ್ಯಾಮ್ ಹೇಳಿದ್ದೇನು?: ನಿನ್ನೆ ರಾತ್ರಿ 12 ಗಂಟೆಗೆ ಫೋನ್ ಬಂತು. ನಾನು ಬಂದು ನೋಡಿದಾಗ ಹೆಲ್ಮೆಟ್ನಲ್ಲಿ ಹಾವು ಸೇರಿತ್ತು. ಈ ಬೇಸಿಗೆ ಕಾಲದಲ್ಲಿ ಹುಷಾರಾಗಿ ಇರಬೇಕು. ಹಾವುಗಳು ಬಿಸಿಲಿನ ತಾಪ ತಡೆಯಲಾರೆದೆ ಭೂಮಿಯಿಂದ ಹೊರಗೆ ಬರುತ್ತವೆ. ನಮಗೆ ಈಗ ಬೆಳಗ್ಗೆ 10 ಗಂಟೆ ಒಳಗೆ ಸಂಜೆ 7 ಗಂಟೆ ಮೇಲೆ ಹಾವು ಸಿಗುತ್ತಿದೆ. ಹೆಚ್ಚಾಗಿ ತಾಪಮಾನದಿಂದ ಭೂಮಿಯಿಂದ ಹೊರಗೆ ಬರುತ್ತಿವೆ. ಆದ್ದರಿಂದ ನಾವು ಬೇಸಿಗೆ ಕಾಲದಲ್ಲಿ ಹುಷಾರಾಗಿ ಇರಬೇಕು ಎಂದು ಉರಗ ರಕ್ಷಕ ಸ್ನೇಕ್ ಶ್ಯಾಮ್ ತಿಳಿಸಿದರು.</p><p>ಇವುಗಳನ್ನೂ ಓದಿ:</p><ul><li>Watch video:16 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪದ ರಕ್ಷಣೆ</a></li><li>ಬೈಕ್ ಸೀಟ್ನಡಿ ಬೆಚ್ಚಗೆ ಮಲಗಿದ್ದ ನಾಗರಹಾವು ಸೆರೆ: ವಿಡಿಯೋ</a></li></ul>
