<p>ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಬೈಕ್ ಸೀಟ್ನಡಿ ಬೆಚ್ಚಗೆ ಮಲಗಿದ್ದ ನಾಗರ ಹಾವನ್ನು ಸೆರೆ ಹಿಡಿಯಲಾಗಿದೆ. </p><p>ಕರ್ನಾಟಕ ಬ್ಯಾಂಕ್ ಉದ್ಯೋಗಿಯಾದ ಸಚಿನ್ ಎಂಬವರಿಗೆ ಸೇರಿದ ಬೈಕ್ನಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ದಾರಿಹೋಕರು ತಕ್ಷಣವೇ ಬೈಕ್ ಮಾಲೀಕ ಸಚಿನ್ಗೆ ವಿಷಯ ತಿಳಿಸಿದ್ದಾರೆ. ಬೈಕ್ನಲ್ಲಿ ನಾಗರಹಾವು ಇರುವುದನ್ನು ಕಂಡು ಬೆಚ್ಚಿಬಿದ್ದ ಸಚಿನ್, ತಕ್ಷಣವೇ ಉರಗ ರಕ್ಷಕ ಆರೀಫ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. </p><p>ಸ್ಥಳಕ್ಕೆ ಬಂದ ಉರಗತಜ್ಞ ಸತತ ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ನಾಗರಹಾವನ್ನು ಸೆರೆ ಹಿಡುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಿಸಲಾದ ಹಾವನ್ನು ನಂತರ ಜನವಸತಿ ಇಲ್ಲದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಸಮ್ಮುಖದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ.</p><p>13 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ: ಕೊಟ್ಟಿಗೆಯಲ್ಲಿ ಅಡಗಿದ್ದ 13 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವನ್ನು ಕಳಸ ತಾಲೂಕಿನ ಹಿರೇಬೈಲು ಸಮೀಪದ ಹೆಮ್ಮಕ್ಕಿ ಗ್ರಾಮದ ಮುಂಡಾನೆಯಲ್ಲಿ ಸೆರೆ ಹಿಡಿಯಲಾಗಿತ್ತು. ದೈತ್ಯ ಗಾತ್ರದ ಕಾಳಿಂಗ ಸರ್ಪ ಕೊಟ್ಟಿಗೆಯಲ್ಲಿ ಕಳೆದ ಎರಡು ದಿನಗಳಿಂದ ಬೆಚ್ಚಗೆ ಮಲಗಿತ್ತು. ಇದನ್ನು ಕಂಡ ಮನೆಯ ಮಾಲೀಕರು ಗಾಬರಿಗೊಂಡು ಕಳಸದ ಉರಗತಜ್ಞ ರಿಜ್ವಾನ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿ ಕೊಂಡಿದ್ದಾರೆ. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ ರಿಜ್ವಾನ್ ಕಾಳಿಂಗವನ್ನು ಸೆರೆ ಹಿಡಿದಿದ್ದರು. </p><p>ಇವುಗಳನ್ನೂ ಓದಿ:</p><ul><li>ಮೂಡಿಗೆರೆ ತಾಲೂಕಿಗೆ ಬಂದ 45 ಕಾಡಾನೆಗಳು: ಭೀಮನ ನಾಯಕತ್ವದಲ್ಲಿ ತೋಟ ಗದ್ದೆಗಳಿಗೆ ನುಗ್ಗುತ್ತಿರುವ ಗಜರಾಜ ಪಡೆ</a></li><li>ಚಿಕ್ಕಮಗಳೂರು: ಬೆಂಕಿ ರಂಗನಾಥನ ಜಾತ್ರೆಯ ಸಡಗರ, ಮೂರು ದಿನ ಸಂಭ್ರಮ</a></li></ul>
